ಮೊದಲ ದಿನವೇ ಸಂಭ್ರಮ: ಜನವೋ ಜನ

* ವಿಕ ಸುದ್ದಿಲೋಕ ಸುತ್ತೂರು
ಹಸಿರು ಹೊದ್ದ ಭೂರಮೆ, ರಸ್ತೆಯ ಇಕ್ಕೆಲಗಳಲ್ಲಿ ಕೇಸರಿ ಧ್ವಜಗಳು, ಸಾಂಸ್ಕೃತಿಕ ವೈಭವದ ನಡುವೆ ಹಬ್ಬದ ವಾತಾವರಣ, ನಾಡಿನ ಮೂಲೆ ಮೂಲೆಗಳಿಂದ ಬಂದಿದ್ದ ಪ್ರತಿನಿಧಿಗಳ ಉತ್ಸಾಹದ ನಡುವೆ ವೀರಶೈವ ಅಧಿವೇಶನಕ್ಕೆ ಭಾನುವಾರ ಚಾಲನೆ ದೊರಕಿತು.
ಅಧಿವೇಶನಕ್ಕಾಗಿ ಟೌನ್‌ಶಿಪ್ ರೂಪ ಪಡೆದುಕೊಂಡ ಕಪಿಲಾ ತೀರದ ಪುಟ್ಟ ಗ್ರಾಮ ಸುತ್ತೂರಿನಲ್ಲಿ ವಿಭಿನ್ನ ಲೋಕವೇ ರೂಪು ಗೊಂಡಿದೆ. ಸುತ್ತೂರಿಗೆ ಆಗಮಿಸುವ ಮಾರ್ಗ ಮಧ್ಯೆ ಜಮೀನು ಈಗ ಹಸಿರುಮಯ. ಜತೆಗೆ ಗಣ್ಯರ ಫ್ಲೆಕ್ಸ್‌ಗಳ ಭರಾಟೆ ಬೇರೆ.
ಮೈಸೂರಿನಿಂದ ಹೊರಟು ಮಾರ್ಗಮಧ್ಯೆ ಪಟಾಕಿಯ ಸ್ವಾಗತ ಪಡೆದು ಹುಮ್ಮಸ್ಸಿನಿಂದಲೇ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವೇದಿಕೆ ಬಲಭಾಗದಲ್ಲಿ ಆಸೀನರಾಗಿದ್ದ ಹರಗುರು ಚರಮೂರ್ತಿಗಳ ಆಶೀರ್ವಾದ ಪಡೆದು ಅಧಿವೇಶನ ಉದ್ಘಾಟಿಸಿದರು. ಮುಖ್ಯಮಂತ್ರಿಗಳ ಪರೋಕ್ಷ ನಾಯಕತ್ವದಲ್ಲೇ ನಡೆಯುತ್ತಿರುವ ಅಧಿವೇಶನದ ಉದ್ಘಾಟನೆ ಸಮಾರಂಭದಲ್ಲಿ ಚಟುವಟಿಕೆಗಳಿಂದಲೇ ಇದ್ದು, ಹಲವರಿಗೆ ಸೂಚನೆಗಳನ್ನು ರವಾನಿಸುತ್ತಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ