`ಉದ್ಯಮಿಯಾಗಿ, ಉದ್ಯೋಗ ನೀಡಲು' ರೆಡಿಯಾಗಿ

*ಆರ್.ಕೃಷ್ಣ ಮೈಸೂರು
`ಉದ್ಯಮಿಯಾಗು, ಉದ್ಯೋಗ ನೀಡು'-ರಾಜ್ಯ ಸರಕಾರದ  ಮಹತ್ವದ ಯೋಜನೆ ಅನುಷ್ಠಾನಕ್ಕೆ ಕಾಲ ಕೂಡಿ ಬಂದಿದೆ.
ಸರಕಾರಿ ಉದ್ಯೋಗವನ್ನೇ ನಂಬಿ ಕೂರುವ ಕಾಲ ಇದಲ್ಲ. ಸ್ವ-ಉದ್ಯೋಗದ ದಾರಿ ಹಿಡಿದು,ಇತರರಿಗೂ ಉದ್ಯೋಗ ನೀಡುವುದು ಈ ಕಾಲದ ಅಗತ್ಯ.ಇಂಥ ಕನಸುಳ್ಳವರಿಗೆ `ಆಸರೆ'ಯಾಗುವುದು ಸರಕಾರದ ಉದ್ದೇಶ. ನಿರುದ್ಯೋಗ ನಿವಾರಣೆ  ಜತೆಗೆ ಉದ್ಯಮಿಗಳ ಸೃಷ್ಟಿ ಇನ್ನೊಂದು ಆಶಯ.
ಮುಖ್ಯವಾಗಿ ಅಂತಿಮ ವರ್ಷದ ತಾಂತ್ರಿಕ (ಎಂಜಿನಿಯರಿಂಗ್), ಡಿಪ್ಲೊಮಾ ಪದವೀಧರರು ಮತ್ತು ನಿರ್ವಹಣೆ ಅಧ್ಯಯನ (ಮ್ಯಾನೇಜ್‌ಮೆಂಟ್) ಸ್ನಾತಕೋತ್ತರ (ಎಂಬಿಎ) ಪದವೀಧರರನ್ನು ಯೋಜನೆ  ಗುರಿಯಾಗಿಟ್ಟು ಕೊಂಡಿದ್ದು, ಮೈಸೂರು,ಮಂಡ್ಯ, ಕೊಡಗು,ಚಾಮರಾಜನಗರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ವಿದ್ಯಾಭ್ಯಾಸದ ಬಳಿಕ ಉದ್ಯೋಗ ಹುಡುಕಾಟಕ್ಕಿಳಿಯುವವರು, ಸೂಕ್ತ ಮಾರ್ಗದರ್ಶನ ಇಲ್ಲದೆ  ಪರಿತಪಿಸುವವರು ಅನೇಕರು.ವಿದ್ಯಾರ್ಥಿ ದಿಸೆಯಲ್ಲಿಯೇ ಪೂರಕ ಮಾಹಿತಿ ಸಿಕ್ಕರೆ  ಮುಂದೆ ಉದ್ಯಮ ತೆರೆಯಲು ಸಹಾಯಕವಾಗುತ್ತದೆ ಎನ್ನುವ ಚಿಂತನೆ ಸರಕಾರದ್ದು. ಆಸಕ್ತರಿಗೆ ಪೂರಕ ಮಾಹಿತಿ,ಸಾಲ ಸೌಲಭ್ಯ, ಮಾರ್ಗದರ್ಶನ, ತಜ್ಞರು, ಅನುಭವಿಗಳೊಂದಿಗೆ ವಿಚಾರ ವಿನಿಮಯಕ್ಕೆ ಅವಕಾಶವಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ