ನಾಯಕ ಸ್ಥಾನ ನಿರೀಕ್ಷಿಸಿರಲಿಲ್ಲ: ಅರ್ಜುನ್

*ಅಜ್ಜಮಾಡ ರಮೇಶ್ ಕುಟ್ಟಪ್ಪ, ಮಡಿಕೇರಿ
`ತಂಡದ ನಾಯಕನಾಗಿ ಆಯ್ಕೆಯಾದದ್ದು ಅನಿರೀಕ್ಷಿತ. ನಾಯಕತ್ವದ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿ' ಎನ್ನುತ್ತಾರೆ ದಿಲ್ಲಿಯ ಹಾಕಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಅರ್ಜುನ್ ಹಾಲಪ್ಪ.
`ತಂಡವನ್ನು ಮುನ್ನಡೆಸುವುದು ಸದಾ ಒತ್ತಡದ ಕೆಲಸ. ಇದುವರೆಗಿನ ನನ್ನ ಅನುಭವ ಸೇರಿಸಿ ಸಮರ್ಥ ರೀತಿಯಲ್ಲಿ ತಂಡವನ್ನು ಮುನ್ನಡೆಸುವ ವಿಶ್ವಾಸವಿದೆ' ಎಂದು ಗುರುವಾರ ದೂರವಾಣಿ ಮೂಲಕ `ವಿಜಯಕರ್ನಾಟಕ'ಕ್ಕೆ ನೀಡಿದ ಪುಟ್ಟ ಸಂದರ್ಶನದಲ್ಲಿ ಹೇಳಿದ್ದಾರೆ.
`ನಮ್ಮ ತಂಡ ಮುಂದಿನ ಒಲಿಂಪಿಕ್ ಪಂದ್ಯಾವಳಿಗೆ ಅರ್ಹತೆ ಪಡೆ ಯುವಂತೆ ಮಾಡುವುದೇ ಪ್ರಥಮ ಗುರಿ. ಸುಲ್ತಾನ್ ಅಜ್ಲಾನ್ ಷಾ ಹಾಕಿ ಪಂದ್ಯಾವಳಿಯೂ ಮಹತ್ವದ್ದು. ಇಲ್ಲಿ ಉತ್ತಮ ಪ್ರದರ್ಶನ ನೀಡುವತ್ತ ನಮ್ಮ ಗಮನ. ಇದಕ್ಕೆ ಆಟಗಾರರನ್ನು ಸಜ್ಜುಗೊಳಿಸಲಾಗು ತ್ತದೆ. ಹೊಸ ಆಟಗಾರರು ಸ್ಥಾನ ಪಡೆಯುತ್ತಿದ್ದಾರೆ. ಹೀಗಾಗಿ ತಂಡ ವನ್ನು ಬಲಿಷ್ಠವಾಗಿ ಕಟ್ಟಲು ಸುವರ್ಣಾವಕಾಶ. ಉತ್ತಮ ಆಟದ ಪ್ರದರ್ಶನ ನೀಡುವವರಿಗೆ ಮಾತ್ರ ಸ್ಥಾನ' ಎಂಬುದು ಅವರ ಅಭಿಪ್ರಾಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ