*ವಿಕ ಸುದ್ದಿಲೋಕ ಸುತ್ತೂರು
ಅಖಿಲ ಭಾರತ ವೀರಶೈವ ಮಹಾಸಭಾದ ೨೨ನೇ ಅಧಿವೇಶನದ ಎರಡನೇ ದಿನ ಭಿನ್ನದನಿಗಳಿಗೆ ವೇದಿಕೆ ಸಿಕ್ಕಿತು !
ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಹಾಗೂ ಅವರ ಸಂಪುಟದ ಮಂತ್ರಿಗಳ ಒಡ್ಡೋಲಗದಿಂದಾಗಿ ಮೊದಲ ದಿನ ಒಳ್ಳೆಯ ಮಾತುಗಳು, ಓಲೈಸುವಿಕೆ, ಸಂಭ್ರಮ-ಸಡಗರಕ್ಕೆ ಮೀಸಲಾಗಿದ್ದ ವೇದಿಕೆಗಳಲ್ಲಿ ಸೋಮವಾರ ಪ್ರಶ್ನೆಗಳು, ಸಂಶಯಗಳು, ರಾಜಕೀಯ ಟೀಕೆ, ಚರ್ಚೆ, ವಾಗ್ವಾದಗಳು ಎದ್ದವು. ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ಎಂದು ಸಂಘಟಕರು ಹೇಳಿದ್ದರಾದರೂ, ಎರಡನೇ ದಿನವೂ ರಾಜಕೀಯದ ಮಾತು ವೇದಿಕೆಗಳಿಂದ ಮೊಳಗಿದವು. ಕನ್ನಡದ ಕಟ್ಟಾಳು ಪಾಟೀಲ ಪುಟ್ಟಪ್ಪ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ `ಭಿನ್ನ' ಮಾತುಗಳು ಮೆರೆದವು !
ಅಖಿಲ ಭಾರತ ವೀರಶೈವ ಮಹಾಸಭಾದ ೨೨ನೇ ಅಧಿವೇಶನದ ಎರಡನೇ ದಿನ ಭಿನ್ನದನಿಗಳಿಗೆ ವೇದಿಕೆ ಸಿಕ್ಕಿತು !
ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಹಾಗೂ ಅವರ ಸಂಪುಟದ ಮಂತ್ರಿಗಳ ಒಡ್ಡೋಲಗದಿಂದಾಗಿ ಮೊದಲ ದಿನ ಒಳ್ಳೆಯ ಮಾತುಗಳು, ಓಲೈಸುವಿಕೆ, ಸಂಭ್ರಮ-ಸಡಗರಕ್ಕೆ ಮೀಸಲಾಗಿದ್ದ ವೇದಿಕೆಗಳಲ್ಲಿ ಸೋಮವಾರ ಪ್ರಶ್ನೆಗಳು, ಸಂಶಯಗಳು, ರಾಜಕೀಯ ಟೀಕೆ, ಚರ್ಚೆ, ವಾಗ್ವಾದಗಳು ಎದ್ದವು. ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ಎಂದು ಸಂಘಟಕರು ಹೇಳಿದ್ದರಾದರೂ, ಎರಡನೇ ದಿನವೂ ರಾಜಕೀಯದ ಮಾತು ವೇದಿಕೆಗಳಿಂದ ಮೊಳಗಿದವು. ಕನ್ನಡದ ಕಟ್ಟಾಳು ಪಾಟೀಲ ಪುಟ್ಟಪ್ಪ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ `ಭಿನ್ನ' ಮಾತುಗಳು ಮೆರೆದವು !
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ