ಕಪಿಲೆಯ ತಟದಲ್ಲೂ ತಪ್ಪದ ಪರದಾಟ

* ಶ್ರೀನಿವಾಸ್ ನಂಜನಗೂಡು
`ದೀಪದ ಕೆಳಗೆ ಕತ್ತಲು' ಎಂಬ ಮಾತು ನಂಜನಗೂಡು ಪಟ್ಟಣದಲ್ಲಿ ಅಕ್ಷರಶಃ ಸತ್ಯ. ಕಪಿಲಾನದಿ ತಟದಲ್ಲಿದ್ದರೂ ನೀರಿಗೆ ಪರದಾಟ ತಪ್ಪಿಲ್ಲ.
ನೀರಿಗಾಗಿ ಬೋರ್‌ವೆಲ್‌ಗಳನ್ನು ಅವಲಂಬಿಸಬೇಕಿದ್ದು, ಬಡಾವಣೆ ಸೇರಿದಂತೆ ಹಲವೆಡೆ ನೀರಿಗಾಗಿ ಮನೆ ಮುಂದೆ ೫ ಅಡಿಗಳ ಹೊಂಡ ತೆಗೆಯಲಾಗಿದೆ. ನಾಗಮ್ಮ ಶಾಲೆ ಆವರಣದಲ್ಲಿ ೩ ಲಕ್ಷ ಗ್ಯಾಲನ್ ಸಾಮರ್ಥ್ಯದ ಟ್ಯಾಂಕ್ ಕಾಮಗಾರಿ ಮುಗಿದಿದ್ದು ಉದ್ಘಾಟನೆಗೆ ಕಾದಿದೆ. ಇದು ಪಟ್ಟಣದ ಶೇ ೩೦ ರಷ್ಟು ಭಾಗಕ್ಕೆ ಮಾತ್ರ ನೀರು ಒದಗಿಸುತ್ತದೆ. ಉಳಿದ ಶ್ರೀರಾಮಪುರ, ಶಂಕರಪುರ, ಎಕ್ಸ್‌ಟೆನ್‌ಷನ್‌ಬಡಾವಣೆ, ಹೌಸಿಂಗ್‌ಬೋರ್ಡ್, ನೀಲಕಂಠನಗರ, ಚಾಮಲಾಪುರ ಹುಂಡಿಯ ಜನರ ನೀರಿನ ಬವಣೆ ನೀಗದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ