ಕೈಗಾರಿಕಾ ಅದಾಲತ್‌ಗೆ ಕೂಡಿ ಬಾರದ ಮುಹೂರ್ತ

*ಆರ್. ಕೃಷ್ಣ ಮೈಸೂರು
ನಾನಾ ಕಾರಣದಿಂದ ಎರಡು ಬಾರಿ ಮುಂದೂಡಲಾಗಿದ್ದ ಕೈಗಾರಿಕಾ ಅದಾಲತ್‌ಗೆ ಏಕೋ ಮುಹೂರ್ತವೇ ಕೂಡಿಬರುತ್ತಿಲ್ಲ. ಮೂರನೇ ಬಾರಿಗೆ ಏ. ೨೭ಕ್ಕೆ ನಿಗದಿಯಾಗಿದ್ದ ಅದಾಲತ್ ಮತ್ತೆ ಮುಂದೂಡ ಲ್ಪಟ್ಟಿದೆ.
ಈ ಹಿಂದೆ ೨೦೧೦ರ ಜನವರಿ ೧೮ರಂದು ನಡೆಯಬೇಕಿದ್ದ ಅದಾಲತ್‌ಅನ್ನು ಚಿತ್ರನಟ ಕೆ.ಎಸ್.ಅಶ್ವಥ್ ಅವರ  ನಿಧನದಿಂದ ಮುಂದೂಡಲಾಯಿತು. ಬಳಿಕ ೨೦೧೦ರ ನವಂಬರ್ ೧೩ರಂದು ನಡೆಯಬೇಕಿದ್ದ ಅದಾಲತ್ ಕೂಡ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರ ವೈಯಕ್ತಿಕ ಸಮಸ್ಯೆಯಿಂದ ಮುಂದೂ ಡಲ್ಪಟ್ಟಿತ್ತು. ಇದೀಗ ೨೭ರ ಅದಾಲತ್  ಮುಂದೂಡಿಕೆಗೆ ಕಾರಣ ಏನೆಂದು ಮಾತ್ರ ಯಾರಿಗೂ ಗೊತ್ತಿಲ್ಲ.  ಆದರೆ ಅದಾಲತ್‌ನಿಂದ ಬಹಳಷ್ಟು ನಿರೀಕ್ಷೆ ಇಟ್ಟು ಕೊಂಡಿದ್ದ ಜಿಲ್ಲೆಯ ಉದ್ಯಮಿಗಳು ಮಾತ್ರ ಇದರಿಂದ ತೀವ್ರ ನಿರಾಸೆಗೊಳಗಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ