ಮುಕ್ತ ವಿವಿ:`ಹಂಗಾಮಿ' ಪರ ಮತ್ತೆ ಲಾಬಿ

* ವಿಕ ವಿಶೇಷ ಮೈಸೂರು
ಕಾಯಂ ಬೋಧಕೇತರ ಸಿಬ್ಬಂದಿ ನೇಮಕ ಆಗುವವರೆಗೆ  ಹಂಗಾಮಿ ಯಾಗಿ `ಇರಲಿ' ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ನೇಮಿಸಿಕೊಂಡಿರುವ ೮೬ ಮಂದಿ  ನೌಕರರಿಗೆ ವೇತನ ಪರಿಷ್ಕರಣೆ ಮಾಡಿಸಲು ಈಗ ತೆರೆಮರೆಯ ಯತ್ನ ಶುರುವಾಗಿದೆ.
೯೯ ಕಾಯಂ ನೌಕರರನ್ನು ನೇಮಕ ಮಾಡಿಕೊಳ್ಳುವ ಸಂಬಂಧ  ಸರಕಾರ ಈಗಾಗಲೇ ಪ್ರಕ್ರಿಯೆ ಆರಂಭಿಸಿದ್ದರೂ,ಹಂಗಾಮಿ ನೌಕರರಿಗೆ ವೇತನ ಹೆಚ್ಚಿಸಲು ವಿವಿಯ ಕೆಲ ವ್ಯವಸ್ಥಾಪನ ಮಂಡಳಿ ಸದಸ್ಯರು ರಾಜಕೀಯ ಮಾಡುತ್ತಿರುವುದು ವಿವಿ ಕುಲಪತಿ ಪ್ರೊ. ಕೆ. ಎಸ್. ರಂಗಪ್ಪ  ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಿವಿ ವ್ಯವಸ್ಥಾಪನ ಮಂಡಳಿ ಸಭೆಯಲ್ಲಿ  ಪ್ರಸ್ತಾಪವಾಗಿರುವ ವೇತನ ಪರಿಷ್ಕರಣೆ ವಿಷಯ, ಸಭೆಯಲ್ಲಿ ಬಿಸಿ-ಬಿಸಿ ಚರ್ಚೆಗೂ ಕಾರಣವಾಗಿದೆ.  ಅಂತಿಮವಾಗಿ ಸಭೆ ಯಾವುದೇ ನಿರ್ಧಾರಕ್ಕೆ ಬರದೇ, ಇದೇ ವಿಷಯ ಚರ್ಚಿಸಲು ಇನ್ನೊಂದು ಸಭೆ ಕರೆಯಲು ನಿರ್ಧರಿಸಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ