ಮೀಸಲು ಅರಣ್ಯದಂಚಲ್ಲಿ ಕಪ್ಪುಶಿಲೆ ಗಣಿಗಾರಿಕೆ

*ವಿಕ ವಿಶೇಷ, ಕೊಳ್ಳೇಗಾಲ
ಮಲೆ ಮಹಾದೇಶ್ವರ ಬೆಟ್ಟ ಹಾಗೂ ಯಡೆಯಾರಳ್ಳಿ ಮೀಸಲು ಅರಣ್ಯದ ೧೦೦ ಮೀಟರ್ ವ್ಯಾಪ್ತಿಯಲ್ಲೇ ಕಪ್ಪು ಶಿಲೆ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ.ಇನ್ನೂ ಅಚ್ಚರಿಯೆಂದರೆ ಇಲ್ಲಿನ ಕ್ವಾರಿಗಳು ಅಧಿಕೃತ. ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅವಕಾಶ ಇಲ್ಲವೆಂಬ ಸುಪ್ರೀಂಕೋರ್ಟ್ ಆದೇಶಕ್ಕೆ ಇಲ್ಲಿ ಕಿಮ್ಮತ್ತಿಲ್ಲ !
ಕಂದಾಯ ಭೂಮಿ: ಮಹಾದೇಶ್ವರಬೆಟ್ಟ ಹಾಗೂ ಯಡೆ ಯಾರಳ್ಳಿ ಮೀಸಲು ಅರಣ್ಯ ಪ್ರದೇಶದ ಸೀಮಾ ರೇಖೆ ೧೦೦ ಮೀಟರ್ ಒಳಗಿನ ಪರಿಮಿತಿಯಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಆದರೆ ಇದು ಕಂದಾಯ ಭೂಮಿ. ಹೀಗಾಗಿ ಅರಣ್ಯ ಇಲಾಖೆಗೆ ಇದನ್ನು ತಡೆಯುವ ಹಕ್ಕಿಲ್ಲ.
ಈ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ಯನ್ನು ತಡೆಯುವಂತೆ ಕಂದಾಯ ಇಲಾಖೆಗೆ ಅರಣ್ಯ ಇಲಾಖೆ ಪತ್ರ ಬರೆದಿಯಾದರೂ ಈವರೆಗೆ ಕಂದಾಯ ಇಲಾಖೆ ಕ್ರಮಕ್ಕೆ ಮುಂದಾಗಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ