ಕಾವೇರಿ ನದಿ ನಂಟು, ನೀರಿಗೆ ಬರ

*ಹನಗೋಡು ನಟರಾಜ ಹುಣಸೂರು
ಇದೀಗ ಬಿರು ಬೇಸಿಗೆ ಬಂದಿದ್ದು, ತಾಲೂಕಿನ ಹಲವು ಗ್ರಾಮ ಹಾಗೂ ಹಾಡಿಗಳಲ್ಲಿ ಕುಡಿಯುವ ನೀರಿಗಾಗಿ ಪಾಡು ಪಡುತ್ತಿದ್ದಾರೆ. ನದಿಗಳಲ್ಲಿ, ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿದಿದೆ. ಹಲವೆಡೆ ವಿದ್ಯುತ್ ಅಡಚಣೆ ಯಿಂದಾಗಿ ಸಮರ್ಪಕ ನೀರು ಪೂರೈಸಲಾಗುತ್ತಿಲ್ಲ.

*ನವೀನ್‌ಕುಮಾರ್ ಪಿರಿಯಾಪಟ್ಟಣ
ಪಿರಿಯಾಪಟ್ಟಣದ ತಾಲೂಕಿನ ಕುಶಾಲನಗರ ಗಡಿ ಭಾಗದ ಗಾಂಧಿನಗರ ಗ್ರಾಮದಲ್ಲಿ ಜನರು ೨ ತಿಂಗಳಿ ನಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿ ದ್ದಾರೆ, ಗ್ರಾಮದಲ್ಲಿ ೮೦ಕ್ಕೂ ಹೆಚ್ಚು ಮನೆಗಳಿದ್ದು ,ಇರುವುದು ೨ ಕೈಪಂಪು ಮಾತ್ರ. ಎಲ್ಲರಿಗೂ ಇದೇ ಆಧಾರ. ಇಲ್ಲಿನ ಟ್ರಾನ್ಸ್‌ಫಾರ್‍ಮರ್ ಕೆಟ್ಟು ನಿಂತು  ಹಲವು ತಿಂಗಳು ಕಳೆದಿದ್ದರೂ ದುರಸ್ತಿಯಾಗಿಲ್ಲ. ಗ್ರಾಮದಿಂದ ಹೊರಭಾಗ ದಲ್ಲಿರುವ ಕೈಪಂಪು ಕುಡಿಯುವ ನೀರಿಗೆ ಮಾತ್ರ. ಇದರಲ್ಲಿ ೨ ಕೊಡ ನೀರು ತೆಗೆದರೆ ಮತ್ತೆರಡು ಕೊಡ ನೀರಿಗೆ ಗಂಟೆಗಟ್ಟಲೆ ಶ್ರಮಪಡಬೇಕು. ಆಗಾಗ ಕೈಪಂಪು ಗಳಿಂದ ಕಲುಷಿತ ನೀರೂ ಬರುತ್ತದೆ . ಇದನ್ನೇ ಶೋಧಿಸಿ ಕಾಯಿಸಿ ಕುಡಿಯುತ್ತಿದ್ದಾರೆ ಇಲ್ಲಿಯ ಮಂದಿ. ತೋಟಗಳ ಬಳಿ ಹಳ್ಳ ತೆಗೆದು ನೀರು ಪಡೆಯುವುದೂ ಉಂಟು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ