*ವಿಕ ಸುದ್ದಿಲೋಕ ಮೈಸೂರು
ಜನಗಣ ಮನದ `ಅಧಿನಾಯಕ' ರವೀಂದ್ರನಾಥ ಠಾಗೋರ್ ಎಂಬ ಮಹಾ ವ್ಯಕ್ತಿತ್ವವನ್ನು ಅರಿತುಕೊಳ್ಳಬೇಕೆ ?
ಮೈಸೂರಿನ ರಂಗಾಯಣದಲ್ಲಿ ಬುಧವಾರ ಆರಂಭವಾಗಿ ರುವ ಬಹುರೂಪಿಗೆ ಬನ್ನಿ. ಬೇರೆ-ಬೇರೆ ವಯೋಮಾನದವರು, ಬದುಕಿನ ವಿವಿಧ ರಂಗದವರು ಅವರವರ ಶಕ್ತ್ಯಾನುಸಾರ, ತಿಳಿವಳಿಕೆ-ಗ್ರಹಿಕೆಗೆ ಅನುಗುಣವಾಗಿಯೇ ರವೀಂದ್ರರನ್ನು ಪರಿಚಯಿಸುವ, ಅರ್ಥೈಸಿಕೊಳ್ಳಲು ಪ್ರೇರೆಪಿಸುವ ಕೆಲಸ ಮುಂದಿನ ನಾಲ್ಕು ದಿನ ಇಲ್ಲಿ ನಡೆಯಲಿದೆ.
ರವೀಂದ್ರನಾಥರ ನಾಟಕ ಮಾತ್ರವಲ್ಲದೇ ಅವರ ಕತೆ-ಕಾದಂಬರಿ ಆಧಾರಿಸಿದ ನಾಟಕ-ನೃತ್ಯ ನಾಟಕಗಳು, ರವೀಂದ್ರರ ಸಾಹಿತ್ಯ ಕುರಿತು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ವಿಚಾರ ಸಂಕಿರಣಗಳು, ರವೀಂದ್ರರ ಕಾವ್ಯಗಳ ವಾಚನ ಸೇರಿದಂತೆ- ಅವರ ಬದುಕಿನ ಬಹುರೂಪಗಳನ್ನು ಅರ್ಥ ಮಾಡಿಕೊಳ್ಳುವ ಬೌದ್ಧಿಕ ಕಾರ್ಯಕ್ರಮ/ಉತ್ಸವಗಳು ಒಂದೆಡೆಯಾದರೆ, ಇನ್ನೊಂದೆಡೆ ರವೀಂದ್ರರನ್ನು ಸರಳವಾಗಿ ಪರಿಚಯಿಸುವ ವಸ್ತು ಪ್ರದರ್ಶನವಿದೆ.
ಕೋಲ್ಕತ್ತಾದ ಶಾಂತಿನಿಕೇತನದ ಪ್ರತಿನಿಧಿಗಳೇ ಬಹುರೂಪಿಯಲ್ಲಿ ಆಯೋಜಿಸಿರುವ ಠಾಗೋರ್ ಕುರಿತ ವಸ್ತು ಪ್ರದರ್ಶನ ಕಲಾಮಂದಿರದ ಸುಚಿತ್ರಾ ಕಲಾ ಗ್ಯಾಲರಿಯಲ್ಲಿ ಅರಳಿ ನಿಂತಿದೆ.
ಜನಗಣ ಮನದ `ಅಧಿನಾಯಕ' ರವೀಂದ್ರನಾಥ ಠಾಗೋರ್ ಎಂಬ ಮಹಾ ವ್ಯಕ್ತಿತ್ವವನ್ನು ಅರಿತುಕೊಳ್ಳಬೇಕೆ ?
ಮೈಸೂರಿನ ರಂಗಾಯಣದಲ್ಲಿ ಬುಧವಾರ ಆರಂಭವಾಗಿ ರುವ ಬಹುರೂಪಿಗೆ ಬನ್ನಿ. ಬೇರೆ-ಬೇರೆ ವಯೋಮಾನದವರು, ಬದುಕಿನ ವಿವಿಧ ರಂಗದವರು ಅವರವರ ಶಕ್ತ್ಯಾನುಸಾರ, ತಿಳಿವಳಿಕೆ-ಗ್ರಹಿಕೆಗೆ ಅನುಗುಣವಾಗಿಯೇ ರವೀಂದ್ರರನ್ನು ಪರಿಚಯಿಸುವ, ಅರ್ಥೈಸಿಕೊಳ್ಳಲು ಪ್ರೇರೆಪಿಸುವ ಕೆಲಸ ಮುಂದಿನ ನಾಲ್ಕು ದಿನ ಇಲ್ಲಿ ನಡೆಯಲಿದೆ.
ರವೀಂದ್ರನಾಥರ ನಾಟಕ ಮಾತ್ರವಲ್ಲದೇ ಅವರ ಕತೆ-ಕಾದಂಬರಿ ಆಧಾರಿಸಿದ ನಾಟಕ-ನೃತ್ಯ ನಾಟಕಗಳು, ರವೀಂದ್ರರ ಸಾಹಿತ್ಯ ಕುರಿತು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ವಿಚಾರ ಸಂಕಿರಣಗಳು, ರವೀಂದ್ರರ ಕಾವ್ಯಗಳ ವಾಚನ ಸೇರಿದಂತೆ- ಅವರ ಬದುಕಿನ ಬಹುರೂಪಗಳನ್ನು ಅರ್ಥ ಮಾಡಿಕೊಳ್ಳುವ ಬೌದ್ಧಿಕ ಕಾರ್ಯಕ್ರಮ/ಉತ್ಸವಗಳು ಒಂದೆಡೆಯಾದರೆ, ಇನ್ನೊಂದೆಡೆ ರವೀಂದ್ರರನ್ನು ಸರಳವಾಗಿ ಪರಿಚಯಿಸುವ ವಸ್ತು ಪ್ರದರ್ಶನವಿದೆ.
ಕೋಲ್ಕತ್ತಾದ ಶಾಂತಿನಿಕೇತನದ ಪ್ರತಿನಿಧಿಗಳೇ ಬಹುರೂಪಿಯಲ್ಲಿ ಆಯೋಜಿಸಿರುವ ಠಾಗೋರ್ ಕುರಿತ ವಸ್ತು ಪ್ರದರ್ಶನ ಕಲಾಮಂದಿರದ ಸುಚಿತ್ರಾ ಕಲಾ ಗ್ಯಾಲರಿಯಲ್ಲಿ ಅರಳಿ ನಿಂತಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ