ಇಚ್ಛಾಶಕ್ತಿ `ಇಷ್ಟ'ವಾದರೆ, ಸಮಸ್ಯೆ ಪರಿಹಾರ ಕಷ್ಟವಲ್ಲ

* ಫಾಲಲೋಚನ ಆರಾಧ್ಯ ಚಾಮರಾಜನಗರ
ಜಿಲ್ಲೆಯಲ್ಲಿ  ಸಮಸ್ಯೆಗಳಿಂದ ಮುಕ್ತವಾಗಿರುವ, ಸುಂದರ ಪರಿಸರವುಳ್ಳ ಶಾಲೆಗಳು ಬೆರಳೆಣಿಕೆಯಷ್ಟು ಮಾತ್ರ. ಉಳಿದ ಶಾಲೆಗಳು ಒಂದಿಲ್ಲೊಂದು ಸಮಸ್ಯೆಗಳಿಂದ ನಲುಗುತ್ತಿವೆ.
ಕೊಠಡಿಗಳ ಕೊರತೆ, ಇಕ್ಕಟ್ಟಿನಲ್ಲಿ ಪಾಠ, ಇದ್ದೂ ಇಲ್ಲದಂತಿರುವ ಶೌಚಾಲಯ, ಕುಡಿಯುವ ನೀರಿಗೆ ವಿದ್ಯಾರ್ಥಿಗಳ ಪರಿತಾಪ, ಆಟದ ಮೈದಾನ ಇಲ್ಲದಿರು ವುದು, ಎರಡು- ಮೂರು ವರ್ಷಗಳ ಕಳೆದರೂ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿರು ವುದು, ಅಪೂರ್ಣಗೊಂಡಿರುವುದು, ಶಾಲಾ ಸಮಿತಿ ಹಾಗೂ ಶಿಕ್ಷಕರ ನಡುವಿನ ರಾಜಕೀಯ ಎಲ್ಲ ಕಡೆ ಇದ್ದದೆ.
ಇಂಥ ಅವ್ಯವಸ್ಥಿತ ಸರಕಾರಿ ಶಾಲೆಗಳ ಸ್ಥಿತಿಯನ್ನು ವಿಜಯ ಕರ್ನಾಟಕ ಪತ್ರಿಕೆ ಬಿಡಿಸಿಡುವ ಪ್ರಯತ್ನವನ್ನು ಮಾಡಿದೆ. ಕಳೆದ ಒಂದು ವಾರದಿಂದ `ವಿಕ ಅಭಿಯಾನ' ದಡಿ ಶಾಲೆಗಳಲ್ಲಿನ ಸಮಸ್ಯೆಗಳನ್ನು  ತೋರಿಸಲಾಗಿದೆ. ಎಲ್ಲೆಲ್ಲಿ ಕೊಠಡಿಗಳ ಕೊರತೆ ಇದೆ. ಶಾಲೆಗಳು ಎಂಥ ವಾತಾವರಣದಲ್ಲಿವೆ ಎಂಬುದನ್ನು  ಚಿತ್ರ ಸಮೇತ ಪ್ರಕಟಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ