ಇದು ದೇವ`ರಾಜಾ'ಯಣ

* ಕುಂದೂರು ಉಮೇಶಭಟ್ಟ ಮೈಸೂರು
ಅದು ಡಾ.ರಾಜಕುಮಾರ್ ಅವರ ಕೆರಳಿದಸಿಂಹ  ಚಿತ್ರ. ಬ್ಲಾಕ್ ಟಿಕೆಟ್ ಮಾರಾಟದ ಜಾಲ ಜೋರಾಗಿದ್ದ ಕಾಲ. ಅದಕ್ಕೆ ಅವಕಾಶ ಕೊಡಲೇ ಇಲ್ಲ ಎನ್ನುವ ಕಾರಣಕ್ಕೆ ೧೩ರೌಡಿಗಳು ಬೆನ್ನತ್ತಿ ಜೀವ ತೆಗೆಯಲು ಮುಂದಾಗಿದ್ದರು.ಅಣ್ಣಾವ್ರ ಶೈಲಿಯಲ್ಲೇ ಆಯುಧ ಪ್ರದರ್ಶಿಸಿದಾಗ ಅವರೆಲ್ಲಾ ಓಡಿ ಹೋದರು.ನಾನು ಬದುಕಿದೆ...
-ಹೀಗೆ ಡಾ.ರಾಜ್ ತಮ್ಮ ಮೇಲೆ ಬೀರಿದ್ದ  ಪ್ರಭಾವವನ್ನು ಹೇಳಿದವರು ಡಾ.ರಾಜ್ ಕುಟುಂಬದ ಚಿತ್ರಗಳನ್ನು ಹೆಚ್ಚು ಪ್ರದರ್ಶಿಸಿರುವ ಮೈಸೂರಿನ ಶಾಂತಲಾ ಚಿತ್ರಮಂದಿರದ ಮ್ಯಾನೇಜರ್ ದೇವರಾಜ್.
ರಾಜ್ ಅವರನ್ನು ಹತ್ತಿರದಿಂದ ಬಲ್ಲ, ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿ ಪ್ರಾಮಾಣಿಕತೆಯ ಬದುಕು ಕಟ್ಟಿಕೊಂಡವರು ದೇವರಾಜ್. ಚಿತ್ರೋದ್ಯಮದ ಭಾಗವಾಗುಳಿದ ಅವರಿಗೆ  ಡಾ.ರಾಜ್ ಎಂದರೆ  ಅವರೊಬ್ಬ ತಪಃ ಶಕ್ತಿ ಎಂದೇ ನಂಬಿಕೆ. ಹಲವು ಬಾರಿ ದೇವರಾಜ್ ಮೇಲೆ ರೌಡಿಗಳ ದಾಳಿ ಪ್ರಯತ್ನವಾಗಿದೆ. ಒಂದೆರಡು ಬಾರಿ ಸಣ್ಣ ಪುಟ್ಟ ಏಟನ್ನೂ ತಿಂದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ