ಹೊಂಡ ಸಿಟಿಯಾಯ್ತು; ಈಗ ಕ್ಲೀನ್ ಸಿಟಿ

ವಿಜಯ ಕರ್ನಾಟಕ ಪತ್ರಿಕೆ ಆರಂಭಿಸಿದ ‘ಸ್ವಲ್ಪ ಅಡ್ಜಸ್ಟ್ ಮಾಡಬೇಡಿ’ಯ ‘ಹೊಂಡ ಸಿಟಿ’ ಪ್ರಚಾರೋಂದಲನಕ್ಕೆ ಸಿಕ್ಕ ಸಾರ್ವಜನಿಕರ ಪ್ರತಿಕ್ರಿಯೆ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು. ಈಗ ನಮ್ಮ ನಗರದ ಸ್ಥಿತಿಯ ಅನಾವರಣಗೊಳಿಸಲು ಹೊರಟಿದ್ದೇವೆ. ಈ ಪ್ರಚಾರೋಂದಲನದ ಹೆಸರು ‘ಕ್ಲೀನ್ ಸಿಟಿ’. ನಮ್ಮ ನಗರ ಚೆನ್ನಾಗಿದೆಯೇ ಎಂಬ ಪ್ರಶ್ನೆ ಕೇಳುವ ಹಾಗೂ ಒಂದಿಷ್ಟು ಛಾಯಾಚಿತ್ರಗಳ ಜತೆಗೇ ತಾಜಾ ಸ್ಥಿತಿಯನ್ನು ಅನಾವರಣಗೊಳಿಸುವ ಪ್ರಯತ್ನವಿದು. ಪತ್ರಿಕೆಯ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆಯವರು ತಮ್ಮ ಚಿತ್ರಗಳ ಮೂಲಕವೇ ಬಿಚ್ಚಿಟ್ಟಿದ್ದಾರೆ. ದಸರೆಗೆ ಕಳೆಗಟ್ಟಲು ಕೊಳೆ ತೊಲಗಿಸಿ ಎಂಬುದೇ ನಮ್ಮ ಧ್ಯೇಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ