ಅಂಗಲಾಚೋದು ತಪ್ಪಲ್ಲ !

ವಿಕ ಸುದ್ದಿಲೋಕ ಮೈಸೂರು
ಕಾಡು, ದಟ್ಟ ಕಾಡು.ಅದೇ ಸ್ವರ್ಗ. ನರಕವೂ. ವರ್ಷದ ಹತ್ತು ತಿಂಗಳು ಬದುಕು ಅರಳುವುದು, ನಲಗುವುದು, ನಗುವುದು ಎಲ್ಲಾ ಅಲ್ಲೆ. ಆಕಾಶದಂಗಳವನ್ನು ಸರ್ವಾಲಂಕೃತವಾಗಿ ಕಣ್ಣ ಕಣಜಕ್ಕೆ ಇಳಿಸುವ ಜೋಪಡಿಗಳ ಮಡಿಲಲ್ಲಿ ಮಲಗಿ ಕನಸು ಕಾಣುವುದು,ಕಾಣುತ್ತಲೇ ಅಡವಿಗೆ ನೆಗೆದು ಬದುಕು ಕಟ್ಟಿಕೊಳ್ಳುವುದು, ಅಪರೂಪ ಕ್ಕೊಮ್ಮೆ ಜೋಪಡಿಯಾಚೆ ಕಾಲು ಚಾಚುವುದು... ಬದುಕು ಅಕ್ಷರಶಃ ಇಷ್ಟೇನೆ.
ದಸರೆ ಬಂತೆಂದರೆ ಒಂದೆರಡು ತಿಂಗಳು ನಾಡು. ಅರಮನೆಯಂತ ಊರು. ಅರಮನೆಯೇ. ಪಲ್ಲಂಗವಲ್ಲ, ಅಂಗಳ ಎನ್ನು ವುದೊಂದೇ ಪರಕು. ಆದರೇನು, ಕಾಡು ಬದುಕನ್ನು ಮೀರಿಸುವುದ ಕ್ಕಾದೀತೆ. ಅಲ್ಲಿನ ಬದುಕಿಗೆ ಅದರದ್ದೇ ಸೊಬಗಿದೆ, ಸೊಗಡಿದೆ. ಅದರ ಮುಂದೆ ‘ಇದನ್ನು’ ನೀವಾಳಿಸಿ ಒಗೆಯಬೇಕು...
ಅರಮನೆ ಅಂಗಳದಲ್ಲಿ ಬೀಡುಬಿಟ್ಟಿರುವ ಗಜಪಡೆ ಪಾಲಕರ ಕುಟುಂಬವನ್ನು ಒಮ್ಮೆ ಮಾತಿಗೆಳೆದು ನೋಡಿ. ‘ಏನೇ ಆದರೂ ನಮಗೆ ನಮ್ಮ ಕಾಡೇ ಚೆಂದ, ಅಟ್ಟಿ ಉಣ್ಣುವ ಊಟವೇ ರಸಗವಳ. ಇಲ್ಲಿ ಎಲ್ಲ ಬುರ್ನಾಸು ’ಎಂದು ಮುಖ ಸಿಂಡರಿಸಿಕೊಳ್ಳುತ್ತಾರೆ. ಏನೇ ಆದರೂ ಮಿತ ಸಂತೃಪ್ತಿ ಅವರದ್ದು. ಕೊಡುವವರಿದ್ದಾರೆ, ಕೊಡು ತ್ತಾರೆ ಎಂದ ಮಾತ್ರಕ್ಕೆ ಆಗಸಕ್ಕೆ ಕೈ ಚಾಚುವ ದುರಾಸೆ ಅವರದ್ದಲ್ಲ. ನಮಗೋ, ಅವರ ಮಿತ ಆಸೆಯನ್ನೂ ಪೂರೈಸುವ ಸೌಜನ್ಯವಿಲ್ಲ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ