೮ ದಿನಗಳೊಳಗೆ ಗುಂಡಿ ಮಾಯ

 ವಿಕ ಸುದ್ದಿಲೋಕ ಮೈಸೂರು
ಮೈಸೂರಿನ ರಸ್ತೆಗಳು ರಿಪೇರಿಯಾದರೆ ಮಾತ್ರ ವಿದೇಶ ಪ್ರವಾಸ, ಮಳೆ ಬರಲಿ ಬಿಡಲಿ ಎಂಟು ದಿನದಲ್ಲಿ ಗುಂಡಿಗಳನ್ನು ಮುಚ್ಚಲು ಕಟ್ಟು ನಿಟ್ಟಿನ ಕ್ರಮ.
ವಿಜಯ ಕರ್ನಾಟಕದ ‘ಸ್ವಲ್ಪ ಅಡ್ಜೆಸ್ಟ್ ಮಾಡಬೇಡಿ’ ಅಂಕಣದಡಿ ಪ್ರಕಟವಾಗುತ್ತಿರುವ ಸರಣಿಗೆ ಮೈಸೂರಿನ ಪ್ರಥಮ ಪ್ರಜೆ ಸಂದೇಶ್‌ಸ್ವಾಮಿಯವರ ಪ್ರತಿಕ್ರಿಯೆ ಇದು.
ಶನಿವಾರ ಪ್ರಕಟವಾದ ‘ದಸರೆಗೆ ಬಂದೋರು ಗುಂಡಿಗೆ, ತೋರಣ ಕಟ್ಟೋರು ಫಾರಿನ್‌ಗೆ‘ ಎಂಬ ವರದಿಗೆ ಸ್ಪಷ್ಟನೆ ನೀಡಲು ತಾವೇ ಖುದ್ದು ವಿಜಯಕರ್ನಾಟಕ ಕಚೇರಿಗೆ ಬಂದಿದ್ದ ಸ್ವಾಮಿ, ಒಂದು ತಾಸಿಗೂ ಹೆಚ್ಚು ಹೊತ್ತು ರಸ್ತೆ ಅಭಿವೃದ್ಧಿ, ದಸರೆ ಸಿದ್ಧತೆ ಕುರಿತು ಮಾಹಿತಿಗಳನ್ನು ಹಂಚಿಕೊಂಡರು.
‘ನಾನು ಮೇಯರ್ ಆದ ೩ ತಿಂಗಳಲ್ಲಿ  ಕಾಮಗಾರಿಗಳೇ ಆಗಿಲ್ಲ. ಹಾಗೆಂದು ಕೆಲಸ ಮಾಡಿಸದೇ ಬಿಟ್ಟು ಹೋಗುವ ಜಾಯಮಾನ ದವನೂ ನಾನಲ್ಲ’ ಎಂದರು.
ಹಿಂದಿನ ಎಲ್ಲಾ ವರ್ಷಗಳಿಗಿಂತ ಈ ವರ್ಷ ದಸರೆ ವೇಳೆ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಸುಮಾರು ೨೦ ಕೋಟಿ ರೂ. ಇದಕ್ಕೆಂದೇ ಮೀಸಲಿಡಲಾಗಿದೆ. ಮೊದಲನೇ ಹಂತದಲ್ಲಿ ೧೩೩೩ ಕಾಮಗಾರಿಗಳಿಗೆ ೯.೬೮ ಕೋಟಿ ರೂ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ