ದಸರೆ ಬಂತು: ಪ್ರವಾಸೋದ್ಯಮ ಇಲಾಖೆ ಏಳಲೇ ಇಲ್ಲ !

ವಿಕ ಸುದ್ದಿಲೋಕ ಮೈಸೂರು
ದಸರೆ ಮತ್ತು ಪ್ರವಾಸೋದ್ಯಮ....
ಇವು ಒಂದಕ್ಕೊಂದು ಬಿಡಿಸಲಾಗದ ನಂಟು. ದಸರೆ ಎನ್ನುವುದೇ ಪ್ರವಾಸೋದ್ಯಮಕ್ಕೆ ಕೇಂದ್ರ ಆಕರ್ಷಣೆ. ವರ್ಷವಿಡೀ ಲಕ್ಷಾಂತರ ಪ್ರವಾಸಿಗರು ಮೈಸೂರಿನತ್ತ ಆಗಮಿಸುತ್ತಾರೆ.  ಅದೂ ದಸರೆಯ ಸಮಯದಲ್ಲೇ ಇದು ಸಿಂಹಪಾಲು.
ಪ್ರವಾಸಿಗರಿಂದ, ಪ್ರವಾಸಿಗರಿಗಾಗಿಯೇ ಇರ ಬೇಕಾದ ಪ್ರವಾಸೋದ್ಯಮ ಇಲಾಖೆಗೆ ಹಿಡಿದಿದೆ ಗ್ರಹಣ. ದಸರೆ ಬಂದರೇನಂತೆ ಆಗ ನೋಡಿದ ರಾಯಿತು... ಎನ್ನುವ ಮನೋಭಾವದಿಂದಲೇ ಕೆಲಸ ಮಾಡುತ್ತಿದೆ ಇಲಾಖೆ.
ಏನು ಮಾಡ್ತಿದೆ ? : ಪ್ರವಾಸಿಗರನ್ನು ಸೆಳೆಯುವ ಚುಂಬಕ ಶಕ್ತಿ ಮೈಸೂರಿಗಿದ್ದರೂ ಪ್ರವಾಸೋದ್ಯಮ ಇಲಾಖೆಯ ಅಶಕ್ತತೆ ಫಲವಾಗಿ ದಸರೆಯನ್ನೂ ಬ್ರಾಂಡ್ ಮಾಡಲಾಗುತ್ತಿಲ್ಲ. ಮೈಸೂರು ಎನ್ನುವುದೇ ವಿಶ್ವದಲ್ಲಿ ಪ್ರಮುಖ ಪ್ರವಾಸೋದ್ಯಮ ಕೇಂದ್ರ. ಇಲ್ಲಿ ಸಮುದ್ರ ತೀರ ಬಿಟ್ಟರೆ ಎಲ್ಲವೂ ಉಂಟು. ೧೦೦ ಕಿ.ಮೀ. ವ್ಯಾಪ್ತಿಯೊಳಗೆ ನೂರಾರು ಪ್ರವಾಸಿ ತಾಣಗಳಿವೆ.
ಎರಡು ತಿಂಗಳ ಹಿಂದೆ ನಡೆದ ಒರಿಸ್ಸಾದ ಪುರಿ ಜಗನ್ನಾಥ ಯಾತ್ರೆಯನ್ನೇ ನೆನಪಿಸಿಕೊಳ್ಳಿ. ಪುರಿಗೆ ಧಾರ್ಮಿಕ ಹಿನ್ನೆಲೆಯಿದ್ದರೂ ಅಲ್ಲಿ  ಆಗಮಿಸುವ ಕೋಟ್ಯಂತರ ಭಕ್ತರು ಬೆಳೆಸುವುದು ಪ್ರವಾಸೋ ದ್ಯಮವನ್ನೇ. ಆಂಧ್ರಪ್ರದೇಶದ ತಿರುಪತಿಯ ಉತ್ಸವವನ್ನೇ ತೆಗೆದುಕೊಳ್ಳಿ. ಇಲ್ಲಿಯೂ ಭಕ್ತರ ದಂಡೇ. ಮೈಸೂರು ದಸರೆ ಕೂಡ ಅಧಿದೇವತೆ ಚಾಮುಂಡೇಶ್ವರಿ ಉತ್ಸವ. ನಾಡಹಬ್ಬ ಎಂದು ಘೋಷಿಸಿ ಧಾರ್ಮಿಕ ಸ್ಪರ್ಶ ನೀಡಿದರೆ ಪ್ರವಾಸಿಗ ರನ್ನು ಇನ್ನಷ್ಟು ಆಕರ್ಷಿಸಬಹುದೇನೋ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ