ಯಾರೂ ಅರಿಯರು ಈ ‘ಹೊಂಡಾಂತರಂಗ’

ವಿಕ ಸುದ್ದಿಲೋಕ ಮೈಸೂರು
‘ಹೊಂಡ ಸಿಟಿ’ಯಲ್ಲಿ ಆದಷ್ಟು ಬೇಗ ದಸರಾ ಕಾಮಗಾರಿಗಳನ್ನು ಆರಂಭಿಸಿ, ಅಷ್ಟೇ ತ್ವರಿತವಾಗಿ ಮುಕ್ತಾಯಗೊಳಿಸಬೇಕೆಂದು ಆಗ್ರಹಿಸಿ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು  ಗುರುವಾರ ನೂರೊಂದು ತೆಂಗಿನ ಕಾಯಿ ಒಡೆಯುವ ಮೂಲಕ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು.
ವಿಜಯಕರ್ನಾಟಕದ ‘ಸ್ವಲ್ಪ ಅಡ್ಜಸ್ಟ್ ಮಾಡಬೇಡಿ’ ಅಭಿಯಾನದ ಶೀರ್ಷಿಕೆಗಳನ್ನೇ ಹೊತ್ತ ಬ್ಯಾನರ್ ಹಿಡಿದುಕೊಂಡಿದ್ದ ಕಾರ್ಯಕರ್ತರು ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ  ಕಾಯಿ ಒಡೆದರು, ಪಾಲಿಕೆ ವಿರುದ್ಧ ಘೋಷಣೆ ಮೊಳಗಿಸಿದರು. ಮೊದಲೆಲ್ಲಾ ದಸರಾ ಆರಂಭಕ್ಕೆ ೨ ತಿಂಗಳು ಬಾಕಿ ಇದೆ  ಇರುವಂತೆಯೆ ದಸರಾ ಕಾಮಗಾರಿ ಶುರುವಾಗುತ್ತಿತ್ತು. ಆದರೆ ಈ ಬಾರಿ ಉತ್ಸವಕ್ಕೆ ೧೫ ದಿನ ಬಾಕಿ ಇದ್ದರೂ, ಸಿದ್ಧತೆಯ ಸೂಚನೆಗಳು ಕಾಣುತ್ತಿಲ್ಲ. ರಸ್ತೆಯೆಲ್ಲಾ ಹಳ್ಳ ಬಿದ್ದಿವೆ. ಹಾಗಾಗಿ ಪಾಲಿಕೆ ಅಧಿಕಾರಿಗಳಿಗೆ  ಸದ್ಬುದ್ಧಿ ನೀಡಪ್ಪ ಎಂದು ಕಾರ್ಯಕರ್ತರು ದೇವರಿಗೆ ಕಾಯಿ ಒಡೆದರು. ಇದು ಕೂಡ ಪ್ರತಿಭಟನೆಯ ಅಸ್ತ್ರ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಸತೀಶ್ ಗೌಡ, ನಗರಾಧ್ಯಕ್ಷ ಉಮೇಶ್, ಯುವ ಅಧ್ಯಕ್ಷ ಲೋಕೇಶ್ ಪಿಯಾ, ಕಾರ್ಯಾಧ್ಯಕ್ಷ ಮಧುಚಂದ್ರ ಮತ್ತಿತರರು ನೇತೃತ್ವ ವಹಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ