ಗುಂಡಿ ಮುಚ್ಚೋದ್ರಲ್ಲೂ ಗಂಡಾಗುಂಡಿ !

‘ಗುಂಡಿ’ ಬಿದ್ದ ರಸ್ತೆಗೆ ಡಾಂಬರು ಬಂತು ಎಂದು ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೆ ಅದು ‘ಕಳಪೆ’ ಎಂಬುದು ಗೊತ್ತಾಗುತ್ತಿದ್ದಂತೆ ಮತ್ತೊಮ್ಮೆ ಬೇಸರಿಸಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ‘ವಿಜಯ ಕರ್ನಾಟಕ’ ನಿರಂತರವಾಗಿ ‘ಹೊಂಡ ಸಿಟಿ’ಯನ್ನು ಸಚಿತ್ರ ವರದಿ ಮಾಡಿದ ಫಲವಾಗಿ ಗುಂಡಿ ಮುಚ್ಚುವ ಕಾರ್ಯಕ್ಕೆ ಇತ್ತೀಚೆಗೆ ಚಾಲನೆ ನೀಡಲಾಗಿತ್ತು. ಆದರೆ ಅದು ಈಗಾಗಲೇ ಹಲವೆಡೆ ಕಿತ್ತು ಬಂದಿದೆ. ಗುಂಡಿ ಮುಚ್ಚುವಷ್ಟೇ ಅದು ‘ಕಳಪೆ’ಯಾಗದಂತೆ ನೋಡಿಕೊಳ್ಳುವುದು ಮುಖ್ಯ ಎನ್ನುವುದು ಜನರ ಅಭಿಮತ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ