ಸಭಾತ್ಯಾಗ ಮಾಡೋದಿಲ್ಲ, ನಮ್ ಕಷ್ಟ ಕೇಳ್ತೀರಾ

ವೀರಾಜಪೇಟೆ: ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವವರು ಹಾಲಿ ವಿಧಾನಭೆ ಅಧ್ಯಕ್ಷರು. ಸ್ಪೀಕರ್ ತಮ್ಮ ಕ್ಷೇತ್ರ ವ್ಯಾಪ್ತಿ ಯಲ್ಲಿ ಮಾಡುತ್ತಿರುವ ಅಭಿವೃದ್ಧಿ ಕೆಲಸವನ್ನು ಈ ರಸ್ತೆಗಳು ಮಾತನಾಡುತ್ತಿವೆ. ತಮ್ಮ ಮುಂಗೋಪ- ಕೋಪ- ತಾಪಗಳನ್ನು ಈ ರಸ್ತೆ ಅಭಿವೃದ್ಧಿಗೆ ಬಳಸಿಕೊಂಡಿದ್ದಲ್ಲಿ ಉಪಕಾರವಾಗುತ್ತಿತ್ತು.
ಜನಪ್ರತಿನಿಧಿಗಳು- ಅಧಿಕಾರಿಗಳು ಮಾತನಾಡುವುದು ಏನಿದ್ದರೂ ಕೋಟಿ ಲೆಕ್ಕದಲ್ಲೇ. ಯಾವ ಕೋಟಿಯೂ ರಸ್ತೆಗಳ ಏಳಿಗೆಗೆ ವಿನಿಯೋಗವಾದಂತೆ ಕಾಣುತ್ತಿಲ್ಲ. ಮಂಜೂರಾಗಿದೆ... ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ... ಶೀಘ್ರದಲ್ಲೇ ಪ್ರಾರಂಭ...          ಈ ಮಾತು ಕೇಳಿ- ಕೇಳಿ ಜನ ಬೇಸತ್ತಿದ್ದಾರೆ.
ಮುಖ್ಯರಸ್ತೆ ಹಾಗೂ ಗ್ರಾಮೀಣ ಭಾಗದ ರಸ್ತೆಗಳು ವ್ಯತ್ಯಾಸವಿಲ್ಲದಂತೆ ಅಧೋಗತಿಗೆ ತಲುಪಿವೆ. ವಾಹನಗಳಲ್ಲಿ ಹೋಗು ವುದಕ್ಕಿಂತ ನಡೆದುಕೊಂಡು ಹೋಗುವುದೇ ವಾಸಿ ಅನ್ನುವ ಪರಿಸ್ಥಿತಿಗೆ ರಸ್ತೆಗಳು ತಲುಪಿವೆ. ವೀರಾಜಪೇಟೆ ಮತ್ತು ಸುತ್ತ ಮುತ್ತಲಿನ ಗ್ರಾಮದಲ್ಲಿ ಉತ್ತಮವಾಗಿರುವ ರಸ್ತೆ ಹುಡುಕುವ ಸ್ಪರ್ಧೆಯನ್ನು ಆಯೋಜಿಸಬಹುದು. ಅಷ್ಟೊಂದು ಹದಗೆಟ್ಟಿವೆ. ರಾಜಕೀಯ ಪಕ್ಷಗಳು, ಈ ವ್ಯಾಪ್ತಿಯಲ್ಲಿರುವ ಸಂಘ- ಸಂಸ್ಥೆಗಳು ಪ್ರಚಾರಕ್ಕಾಗಿ ಏನೇನೋ ಮಾಡುತ್ತವೆ. ಆದರೆ, ರಸ್ತೆ ದುಸ್ಥಿತಿ ಬಗ್ಗೆ ಧ್ವನಿ ಎತ್ತುವ ಸಾಮರ್ಥ್ಯವನ್ನು ಅದ್ಯಾಕೋ ಕಳೆದುಕೊಂಡಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ