ರೇಷ್ಮೆ ಕೃಷಿ: ಎಲ್ಲೆಡೆ ಶೂನ್ಯ ಮಂಡ್ಯದಲ್ಲಿ ಮಾನ್ಯ

ರೇಷ್ಮೆ ಕೃಷಿ
ಎಲ್ಲೆಡೆ ಶೂನ್ಯ
ಮಂಡ್ಯದಲ್ಲಿ ಮಾನ್ಯ
ವಿಕ ತಂಡ
ಮಂಡ್ಯ:
ಒಂದು ಕಾಲದಲ್ಲಿ ರೇಷ್ಮೆ ಕೃಷಿಯು ಮಳೆಯಾಶ್ರಿತ ಮತ್ತು ಕೊಳವೆ ಬಾವಿ ಆಶ್ರಯಿಸಿದ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಾಮರಾಜನಗರ ಜಿಲ್ಲೆಗಳಿಗಷ್ಟೇ ಸೀಮಿತ ಎನ್ನುವಂತಿತ್ತು. ಇದೀಗ ಸಮೃದ್ದ ನೀರಾವರಿ ಪ್ರದೇಶ ಮಂಡ್ಯ ಜಿಲ್ಲೆಯಲ್ಲೂ ದಾಪುಗಾಲಿಟ್ಟಿದೆ.
ಉದ್ಯೋಗ ಸೃಷ್ಟಿ, ಸುಲಭದ ಬೇಸಾಯ, ಕಡಿಮೆ ಅವಧಿ ಮತ್ತು ಬಂಡವಾಳದಲ್ಲಿ ಹೆಚ್ಚು ಲಾಭ ಸಿಗುವಂಥದ್ದು ಇದು. ಇದೀಗ ಜಿಲ್ಲೆಯಲ್ಲಿ ೪೧,೦೩೫ ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆದು, ರೇಷ್ಮೆ ಕೃಷಿ ಅವಲಂಬಿಸಲಾಗಿದೆ. ಕಬ್ಬು ಮತ್ತು ಭತ್ತದ ಬೇಸಾಯದಷ್ಟೇ ರೇಷ್ಮೆ ಕೃಷಿಗೂ ಗಮನ. ಜಿಲ್ಲೆಯಲ್ಲಿ  ವಾರ್ಷಿಕ ೧೫೨೦೦ ಮೆಟ್ರಿಕ್ ಟನ್ ರೇಷ್ಮೆ ಗೂಡು ಉತ್ಪಾದನೆಯಾಗುತ್ತಿದೆ. ಶೇ. ೨೫ರಷ್ಟು ಕುಟುಂಬಗಳು ರೇಷ್ಮೆಗೆ ಮಾರು ಹೋಗಿವೆ. ಇಲ್ಲಿನ ಮಣ್ಣು ಮತ್ತು ಹವಾಗುಣವು ವಿ೧ ತಳಿ ಹಿಪ್ಪುನೇರಳೆ, ಸಿಎಸ್ಆರ್ ಹೈಬ್ರಿಡ್ ರೇಷ್ಮೆ ಹುಳು ಸಾಕಣೆಗೆ ಪೂರಕ. ೨೦೦೯ನೇ ಸಾಲಿನಿಂದ ಹಿಪ್ಪು ನೇರಳೆ ನಾಟಿ ೭೫೦೦ ಎಕರೆಯಷ್ಟು ವಿಸ್ತಾರಗೊಂಡಿದೆ. ಜಿಲ್ಲೆಯಲ್ಲಿ ರೇಷ್ಮೆ ಕೃಷಿ ವಿಸ್ತಾರಗೊಂಡ ಹಿನ್ನೆಲೆಯಲ್ಲಿ ಸರಕಾರವು ಕೆ.ಆರ್.ಪೇಟೆ ಮತ್ತು ಮಳವಳ್ಳಿಯಲ್ಲಿ ಮಾರಾಟ ಕೇಂದ್ರಗಳನ್ನು ತೆರೆದಿದೆ. ರಾಮನಗರ ಮತ್ತು ಚನ್ನಪಟ್ಟಣ ರೇಷ್ಮೆ ಗೂಡು ಮಾರುಕಟ್ಟೆಗಳು ಜಿಲ್ಲೆಗೆ ಸಮೀಪದಲ್ಲಿವೆ. ಹಾಗಾಗಿ ರೈತರಿಗೆ ಮಾರುಕಟ್ಟೆಯ ಸಮಸ್ಯೆ ಇಲ್ಲ. ಸಾಗಣೆಗೂ ಚಿಂತೆ ಇಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ