ಟೆಂಪೊ ಕೆರೆಪಾಲು: ೨೭ ಮಂದಿ ಬಲಿ

ವಿಕ ಸುದ್ದಿಲೋಕ ಮೈಸೂರು
ಮಹಿಳೆಯರು, ಮಕ್ಕಳಿದ್ದ ಟೆಂಪೋ ಕೆರೆಗೆ ಉರುಳಿ ೨೭ ಮಂದಿ ಮೃತಪಟ್ಟ ದಾರುಣ ಘಟನೆ ಮೈಸೂರು-ನಂಜನಗೂಡು ರಸ್ತೆಯ ಮರಸೆ ಬಳಿ ಮಂಗಳವಾರ ಸಂಜೆ ನಡೆದಿದೆ.
ನಂಜನಗೂಡಿನಲ್ಲಿ ಬೀಗರ ಔತಣ ಮುಗಿಸಿ ೩೩ ಜನರನ್ನು ಹೊತ್ತು ತರುತ್ತಿದ್ದ  ೪೦೭ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಮಂಡಕಳ್ಳಿ ವಿಮಾನ ನಿಲ್ದಾಣ ಸಮೀಪದ ಉಂಡಬತ್ತಿನ ಕೆರೆಗೆ ಬಿದ್ದಿತು. ಮಕ್ಕಳು ಸೇರಿ ೨೭ ಮಂದಿ ನೀರಿನಲ್ಲೇ ಕೊನೆ ಉಸಿರೆಳೆದರೆ,ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತರಲ್ಲಿ ಬಹುತೇಕರು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಅರಳಕುಪ್ಪೆಯವರು. ಬಳ್ಳೆಕೆರೆ,ಹಿರೇಮರಳಿ, ಎಲೆಕೆರೆ, ಕಟ್ಟೇರಿಯ ತಲಾ ಒಬ್ಬರು ಕೊನೆ ಉಸಿರೆಳೆದರು. ಚಾಲಕ, ಕ್ಲೀನರ್ ತಲೆ ತಪ್ಪಿಸಿಕೊಂಡಿದ್ದಾರೆ. ರಾತ್ರಿ ೮ರ ಸುಮಾರಿಗೆ ಎಲ್ಲಾ ಶವ ಮತ್ತು ಟೆಂಪೋವನ್ನು ನೀರಿನಿಂದ ಮೇಲೆತ್ತಲಾಯಿತು. ಘಟನಾ ಸ್ಥಳ ಮತ್ತು ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಮೃತರ ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು.ಆಕ್ರೋಶ ತಪ್ತ ಜನ ತೀವ್ರ ಪ್ರತಿಭಟನೆಯನ್ನೂ ನಡೆಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ