ಸಂಸದ ರಾಜಶೇಖರಮೂರ್ತಿ ನಿಧನ

ವಿಕ ಸುದ್ದಿಲೋಕ ಹೊಸದಿಲ್ಲಿ
ರಾಜ್ಯಸಭೆ  ಸದಸ್ಯ ಹಾಗೂ ಕೇಂದ್ರ ಮಾಜಿ ಸಚಿವ ರಾಜಶೇಖರಮೂರ್ತಿ ಅವರು ಭಾನು--ವಾರ ರಾತ್ರಿ ಹೃದಯಾ ಘಾತದಿಂದ ನಿಧನ ಹೊಂದಿದರು.
ಭಾನುವಾರ ರಾತ್ರಿ ೮.೪೫ರ ಸುಮಾರಿಗೆ ಮನೆಯಲ್ಲಿ ಟಿವಿ ನೋಡುತ್ತಿದ್ದ ರಾಜಶೇಖರ-ಮೂರ್ತಿಯವರಿಗೆ ಎದೆನೋವು ಕಾಣಿಸಿ-ಕೊಂಡಿತ್ತು. ಅವರ ಸಹಾಯಕನ ಮೂಲಕ ವಿಷಯ ತಿಳಿದ ರಾಜ್ಯಸಭೆ ಸದಸ್ಯ ಕೆ.ಬಿ. ಶಾಣಪ್ಪ ಆಗಮಿಸಿ ಮೂರ್ತಿಯವರನ್ನು ಸಮೀಪದ ರಾಮ ಮನೋ-ಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು `ಇವರು ಬದು-ಕುವ ಸಾಧ್ಯತೆಗಳು ಕಡಿಮೆ' ಎಂದು ಹೇಳಿದ ತಕ್ಷಣ ಮಕ್ಕಳಿಗೆ ಮಾಹಿತಿ ನೀಡಲಾಯಿತು. ಮಧ್ಯರಾತ್ರಿ ೧೨.೦೦ ಗಂಟೆ ಹೊತ್ತಿಗೆ ಅವರು ಕೊನೆಯುಸಿರೆಳೆದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ