ವಿಧ್ವಂಸಕ ಕೃತ್ಯ ನಡೆಸಲು ಭಯೋತ್ಪಾದಕರು ದೇಶ ಪ್ರವೇಶಿಸಿದ್ದಾರೆ ಎನ್ನುವ ಕೇಂದ್ರ ಗುಪ್ತಚಾರ ಇಲಾಖೆ ಮಾಹಿತಿಯ ಹಿನ್ನೆಲೆಯಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿ ನಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ.
ಪ್ರೇಕ್ಷಕರನ್ನು ಸೆಳೆಯುವಲ್ಲಿ ಪ್ರೇಮ ಸೌಧ ತಾಜ್ಮಹಲ್ ಅನ್ನು ಮೀರಿಸಿರುವ ಅಂಬಾವಿಲಾಸ ಅರಮನೆ,ಮೃಗಾಲಯ, ಚಾಮುಂಡಿಬೆಟ್ಟ, ವಿದೇಶಿ ಯರನ್ನು ಆಕರ್ಷಿಸುವ ಕೆ.ಆರ್.ಎಸ್. ಬೃಂದಾವನಕ್ಕೆ ನಿತ್ಯ ಸಾವಿರಾರು ಮಂದಿ ಬರುತ್ತಿದ್ದು, ಈ ಸ್ಥಳಗಳು ಭಯೋತ್ಪಾದಕರ ಕೃತ್ಯಗಳಿಗೆ ಟಾರ್ಗೆಟ್ ಎನ್ನಲಾಗಿದೆ. ಇದರೊಂದಿಗೆ ಆರ್ಎಂಪಿ, ಸಿಎಫ್ಟಿಆರ್ಐ, ಡಿಎಫ್ಆರ್ಎಲ್ ಅಲ್ಲದೇ, ಇನ್ಫೋಸಿಸ್ ಸೇರಿದಂತೆ ಪ್ರಮುಖ ಉದ್ಯಮಗಳು ಮೈಸೂರಿನಲ್ಲಿದ್ದು, ಇವು ಉಗ್ರರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನುವುದು ಗುಪ್ತಚಾರ ಇಲಾಖೆಯ ಊಹೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ