ಕಾಂಗ್ರೆಸ್, ದಳ ಪೈಪೋಟಿ ನಡುವೆ ಬಿಜೆಪಿ ಕಸರತ್ತು

ವಿಕ ತಂಡ
ಪಿರಿಯಾಪಟ್ಟಣ ತಾಲೂಕಿನ ೫ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಒಟ್ಟು ೨೦ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.
ಇದರಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಎಲ್ಲ ೫ ಕ್ಷೇತ್ರ ಗಳಲ್ಲಿ ಸ್ಪರ್ಧಿಸಿ ದ್ದರೆ, ಬಿಎಸ್‌ಪಿ ೩ ಕ್ಷೇತ್ರಗಳಲ್ಲಿ ಕಣಕ್ಕಿಳಿ ದಿದೆ. ಇಬ್ಬರು ಪಕ್ಷೇತರ ಅಭ್ಯರ್ಥಿ ಗಳು ಇದ್ದಾರೆ. ಕಳೆದ ಬಾರಿ ಜೆಡಿಎಸ್ ೧ ಮತ್ತು ಎಬಿಪಿಜೆಡಿಯ ೪ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆದರೆ ಬಿಜೆಪಿ ಖಾತೆ ತೆರೆದಿರಲಿಲ್ಲ.
ಕಂಪಲಾಪುರ
ಅನುಸೂಚಿತ ಪಂಗಡಕ್ಕೆ ಮೀಸಲಾಗಿದ್ದು ೩೦೩೮೨ ಮತದಾರರನ್ನು ಹೊಂದಿದೆ. ಈ ಹಿಂದೆ ಜಾ.ದಳದ ಕೋಮಲತಾ ಕಿಟ್ಟಪ್ಪ ಆಯ್ಕೆಯಾಗಿದ್ದರು.ಈ ಬಾರಿ ಕೆ.ಪಿ.ನಿಂಗರಾಜು(ಕಾಂಗ್ರೆಸ್) , ಚಂದ್ರ (ಬಿಜೆಪಿ), ಎಂ.ಪಿ.ಚಂದ್ರೇಶ್ (ಜೆಡಿಎಸ್) ಅಭ್ಯರ್ಥಿಗಳಾಗಿದ್ದಾರೆ. ಜಾ.ದಳದ ಮಾಜಿ ತಾ.ಪಂ.ಸದಸ್ಯ ಚಂದ್ರೇಶ್ ಮತ್ತು ವಾಣಿಜ್ಯೋದ್ಯಮಿ ಕಾಂಗ್ರೆಸ್‌ನ ಕೆ.ಪಿ.ನಿಂಗರಾಜು ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಹುಣಸವಾಡಿ
ಹಿಂದುಳಿದ ಅ ವರ್ಗ ಕ್ಕೆ ಮೀಸಲಾಗಿದ್ದು ಒಟ್ಟು ೨೮೦೬೧ ಮತಗಳಿವೆ.. ಕಳೆದ ಬಾರಿ ಎಬಿಪಿಜೆಡಿಯಿಂದ ಕೆ.ಸಿ. ರಾಜಶೇಖರಯ್ಯ ಆಯ್ಕೆಯಾಗಿದ್ದರು. ಈ ಬಾರಿ ಸರಿತಾ (ಕಾಂಗ್ರೆಸ್), ಎಂ.ಕೆ.ಸುಚಿತ್ರಾ (ಜೆಡಿಎಸ್) ಲತಾ (ಬಿಜೆಪಿ) ಕಣದಲ್ಲಿದ್ದಾರೆ.  ಕಾಂಗ್ರೆಸ್ ಮತ್ತು ಜೆಡಿಎಸ್‌ನಡುವೆ ನೇರ ಸ್ಪರ್ಧೆ ಇದೆ.
ಕೊಪ್ಪ: ಅನುಸೂಚಿತ ಜಾತಿ ಮಹಿಳೆಗೆ ಮೀಸಲಾಗಿದ್ದು ತಾಲೂಕಿನಲ್ಲಿ ಅತಿಹೆಚ್ಚು ಮತದಾರರನ್ನು ಒಳಗೊಂಡಿ ರುವ ಜಿ.ಪಂ ಕ್ಷೇತ್ರ. ೩೨೩೩೧ ಮತದಾರರನ್ನು ಹೊಂದಿದೆ. ಈ ಹಿಂದೆ ಎಬಿಪಿಜೆಡಿಯಿಂದ ಚೌಡಯ್ಯ ಆಯ್ಕೆಯಾಗಿ ದ್ದರು. ಈ ಬಾರಿ ಕಾವೇರಿ ಶೇಖರ್(ಕಾಂಗ್ರೆಸ್), ಜಯಂತಿ (ಜೆಡಿಎಸ್), ಎಚ್.ಕೆ.ಭಾಗ್ಯ (ಬಿಜೆಪಿ), ರಾಜಮ್ಮ (ಬಿಎಸ್‌ಪಿ), ಆರ್.ಹರಿಣಿಕುಮಾರಿ(ಪಕ್ಷೇತರ) ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಸ್ಪರ್ಧೆ ಇದ್ದರೂ ಬಿಜೆಪಿ ಅಭ್ಯರ್ಥಿ ಪೈಪೋಟಿ ನಡೆಸಿದ್ದಾರೆ. ಬಿಎಸ್‌ಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಪಡೆ ಯುವ ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆ ಉಂಟುಮಾಡುವ ಸಾಧ್ಯತೆ ಇದೆ.
ಬೆಟ್ಟದಪುರ
ಬೆಟ್ಟದಪುರ ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ  ೨೯೧೧೭ ಮತದಾರರಿದ್ದು, ಕಳೆದ ಬಾರಿ ಎಬಿಪಿಜೆಡಿ ವತಿಯಿಂದ ಕೆ.ಸಿ.ಕೃಷ್ಣಪ್ಪ ಆಯ್ಕೆಯಾಗಿದ್ದರು. ಈ ಬಾರಿ ಮಾಜಿ ಶಾಸಕ ಕಾಳಮರೀಗೌಡರ ಪುತ್ರಿ ಡಿ.ಕೆ.ಮಂಜುಳಾರಾಜ್(ಕಾಂಗ್ರೆಸ್), ಕೌಸಲ್ಯ (ಜೆಡಿಎಸ್), ಬಿ.ಸಿ.ಭಾಗ್ಯ (ಬಿಜೆಪಿ), ಯಶೋದಮ್ಮ (ಬಿಎಸ್‌ಪಿ) ಸ್ಪರ್ಧೆಯಲ್ಲಿದ್ದಾರೆ. ಕಾಂಗ್ರೆಸ್, ದಳ, ಬಿಜೆಪಿ ಅಭ್ಯರ್ಥಿಗಳ ನಡುವೆ ಪೈಪೋಟಿ ಇದೆ.
ರಾವಂದೂರು
ಸಾಮಾನ್ಯವರ್ಗಕ್ಕೆ ಮೀಸಲಾಗಿದ್ದು, ೨೭೧೮೪ ಒಟ್ಟು ಮತದಾರರಿದ್ದಾರೆ. ಕಳೆದ ಬಾರಿ  ಎಬಿಪಿಜೆಡಿವತಿಯಿಂದ ಹೇಮಾವತಿ ಶಿವಕುಮಾರ್ ಆಯ್ಕೆಯಾಗಿದ್ದರು. ಕುರುಬ ಮತದಾರರೆ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಕಣದಲ್ಲಿರುವ ನಾಲ್ವರು ಅಭ್ಯರ್ಥಿUಳೂ ಕುರುಬ ಜನಾಂಗಕ್ಕೆ ಸೇರಿದವರಾಗಿದ್ದಾರೆ.
ಡಿ.ಎ.ಜವರಪ್ಪ(ಕಾಂಗ್ರೆಸ್), ಎಸ್.ಎ.ಶಿವಣ್ಣ (ಜೆಡಿಎಸ್) ಜಿ.ಪಂ.ಮಾಜಿ ಉಪಾಧ್ಯಕ್ಷ ವಿ.ಜಿ.ಅಪ್ಪಾಜಿಗೌಡ (ಬಿಜೆಪಿ), ಶಶಿಕುಮಾರ್ (ಬಿಎಸ್‌ಪಿ), ಹೇಮಾವತಿ ಶಿವಕುಮಾರ್ (ಪಕ್ಷೇತರ) ಸ್ಪರ್ಧಿಸಿ ದ್ದಾರೆ. ಐವರು ಕಣದಲ್ಲಿದ್ದರೂ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸಮಬಲ ಹೋರಾಟವಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ