ಸಾವು ಬಂದು ಕುಂತೈತಲ್ಲೋ...

ತಿ.ನರಸೀಪುರ
ಬೃಹತ್ ವರುಣಾ ಕೆರೆಯ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ೨೧೨ ಹಾದು ಹೋಗಿದೆ. ಆದರೆ ಈ ಕೆರೆಗೂ ತಡೆಗೋಡೆಗಳೂ ಇಲ್ಲ, ಅಪಾಯವನ್ನು ಎಚ್ಚರಿಸುವ ಫಲಕಗಳೂ ಇಲ್ಲ. ಸದಾ ನೀರಿರುವ ಈ ಕೆರೆಯ ಮತ್ತೊಂದು ಬದಿಯಲ್ಲಿ ೧೫ ರಿಂದ ೨೦ ಅಡಿ ಆಳ ಹೊಂದಿದ ಅಚ್ಚುಕಟ್ಟು ಪ್ರದೇಶವಿದೆ.
ನಿತ್ಯವೂ ಬಸ್ ಸೇರಿದಂತೆ ನೂರಾರು ವಾಹನಗಳು ಸಾಗುತ್ತವೆ. ಓವರ್‌ಲೋಡ್ ಮರಳು ಲಾರಿಗಳಿಗೂ ಕಡಿಮೆ ಇಲ್ಲ. ಸುಮಾರು ೫೦೦-೬೦೦ ಮೀಟರ್ ಉದ್ದದ ಕೆರೆ ಏರಿ ಮೇಲಿನ ಮೈಸೂರು- ತಿ.ನರಸೀಪುರ ಮುಖ್ಯರಸ್ತೆಯಲ್ಲಿ ಸಾಗುವ ವಾಹನಗಳಿಗೆ ವೇಗ ಮಿತಿಯೇ ಇಲ್ಲ. ಖಾಸಗಿ ಬಸ್‌ಗಳಲ್ಲಂತೂ ಪೈಪೋಟಿ.
ಹೀಗಿದ್ದರೂ ಸುರಕ್ಷಿತ ದೃಷ್ಟಿಯಿಂದ ಎರಡೂ ಬದಿಯಲ್ಲೂ ಕಬ್ಬಿಣದ ಕಂಬಗಳನ್ನು ಅಳವಡಿಸಿಲ್ಲ. ಕೆಲ ತಿಂಗಳ ಹಿಂದೆ ಖಾಸಗಿ ಬಸ್ ಅಚ್ಚುಕಟ್ಟು ಪ್ರದೇಶಕ್ಕೆ ಉರುಳಿತ್ತಾದರೂ ಪ್ರಾಣಾಪಾಯ ಸಂಭವಿಸಿರ ಲಿಲ್ಲ. ಒಂದುವೇಳೆ ಕೆರೆಗೆ ಬಿದ್ದಿದ್ದರೆ ಹೇಳುವಂತಿರಲಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ