ಈ ಮರ ಅಂತರ್ಜಲಕ್ಕೆ ಸಂಚಕಾರ

ಕುಂದೂರು ಉಮೇಶಭಟ್ಟ ಮೈಸೂರು
ಅಂತರ್ಜಲಕ್ಕೆ ಸಂಚಕಾರ ತರುವ ನೀಲಗಿರಿ ಹಾಗೂ ಅಕೇಷಿಯಾ ನಿಷೇಧಕ್ಕೆ ರಾಜ್ಯ ಸರಕಾರ ಮುಂದಾಗಿ ದ್ದರೂ, ಈ ವರ್ಷದಲ್ಲಿ ಬೆಳೆದಿರುವ ಲಕ್ಷಕ್ಕೂ ಹೆಚ್ಚು ಸಸಿಗಳು ನರ್ಸರಿಗಳಲ್ಲಿ ಬೆಳೆದು ನಿಂತಿವೆ.
ಅರಣ್ಯ ಪ್ರದೇಶದಲ್ಲಿ ಏಕಪ್ರಬೇಧ ಬೆಳೆಸುವ ಬದಲು ಬಹುಪಯೋಗಿ ಮರಗಳನ್ನು ಬೆಳೆಸಲು ನೂತನ ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ನರ್ಸರಿಗಳಲ್ಲಿರುವ ನೀಲಗಿರಿ ಹಾಗೂ ಅಕೇಷಿಯಾ ಸಸಿಗಳ ಲೆಕ್ಕ ಶುರುವಾಗಿದೆ.
ನಾಲ್ಕು ದಶಕದಿಂದ ರಾಜ್ಯದಲ್ಲಿ ತಳವೂರಿದ ನೀಲಗಿರಿ ಹಾಗೂ ಅಕೇಷಿಯಾ ರಾಜ್ಯದ ಒಟ್ಟು ಅರಣ್ಯ ಭಾಗ  ಶೇ.೨೨.೬೦ರಲ್ಲಿ ಇರುವುದು ಶೇ.೮ರಷ್ಟು. ಅದರಲ್ಲೂ  ಇಲಾಖೆಯೇ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿತ್ರದುರ್ಗ, ತುಮಕೂರು ಸೇರಿದಂತೆ ಬಯಲುಸೀಮೆಯ ಜಿಲ್ಲೆಗಳಲ್ಲಿ ಹೆಚ್ಚಾಗಿ ಇದನ್ನು ಬೆಳೆಸಿದೆ
ಅರಣ್ಯ ಇಲಾಖೆ ವೆಬ್‌ಸೈಟ್‌ನಲ್ಲಿರುವ ಮಾಹಿತಿಯಂತೆ, ೪ ನರ್ಸರಿಗಳಲ್ಲೇ ಇರುವ ಸಸಿಗಳ ಸಂಖ್ಯೆ  ೮೫ ಸಾವಿರ. ಅರಣ್ಯ ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ೩೫ ವರ್ಷದ ಅವಧಿಯಲ್ಲಿ ಲಕ್ಷಾಂತರ ಸಸಿ ಬೆಳೆಸಲಾಗಿದೆ. ಈಗ ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಯಲ್ಲಿನ ನರ್ಸರಿಗಳಲ್ಲೇ ಈ ಎರಡು ತಳಿಯ ೨ ಲಕ್ಷಕ್ಕೂ ಹೆಚ್ಚು ಸಸಿಗಳಿವೆ. ಅರಣ್ಯ ಇಲಾಖೆಗೆಂದೇ ಈ ಸಸಿಗಳನ್ನು ಬೆಳೆಸಿಲ್ಲ. ಬದಲಿಗೆ ರೈತರ ಬೇಡಿಕೆ ಪೂರೈಸಲು ಈ ಸಸಿಗಳನ್ನು ಬೆಳೆಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ