ಅವರೆಕಾಯಿ ಬಂದಿದೆ !

ಎಸ್.ಕೆ.ಚಂದ್ರಶೇಖರ್
ತಾಜಾ ತಾಜಾ ಕಳ್ಳೇಕಾಯ್, ಗರಂ ಗರಂ ಕಳ್ಳೇಕಾಯ್ ಎಂದು ಹಾಡಿದ್ದು ಕಲ್ಪನಾ. ಈಗ ಅವರಿದ್ದಿದ್ದರೆ ತಾಜಾ ತಾಜಾ ಅವರೆಕಾಯ್,  ಚಳಿ ಬಿಡಿಸುವ ಅವರೇಕಾಯ್ ಎಂದು ಕೂಗುತ್ತಿದ್ದರೇನೋ ?
ಮಾಗಿಯ ಚಳಿ ಬಂದಿದೆ. ದಿನೇ ದಿನೆ ಚಳಿ ಹೆಚ್ಚುತ್ತಿದೆ. ಮೈಯೊಳಗೆ ಚಳಿ ಓಡಿಸಲು ಎದುರಾಗಿರುವುದೇ ಅವರೇಕಾಯಿ. ಮಾಗಿಯ ಅತಿಥಿ ಬಂದಿದ್ದಾನೆ ನಮ್ಮ ಮನೆ ಬಾಗಿಲಿಗೆ. ಕೈ ಮುಗಿದು ಒಳಗೆ ಕರೆದುಕೊಳ್ಳಬೇಕಷ್ಟೇ. ಎಲ್ಲೆಲ್ಲೂ ಅವನದ್ದೇ ಘಮಲು. ಬನ್ನಿ ಹೀಗೇ ಒಂದು ಸುತ್ತು ಹಾಕೋಣ.
ದೇವರಾಜ ಮಾರುಕಟ್ಟೆಯಲ್ಲಿ ಈ ಹಿಂದೆ ಮಾರಾಟವಾಗುತ್ತಿದ್ದ ರಾಶಿ ರಾಶಿ ಅವರೆ ಈಗಿಲ್ಲ. ಹಾಗೆಂದು ಅವರೆ ಸಿಗೋದಿಲ್ಲವೆಂದಲ್ಲ. ಸದ್ಯಕ್ಕೆ ಕೆ.ಜಿ.ಗೆ ೨೦-೨೫ ರೂ. ಬೆಳೆ ಕಡಿಮೆಯಾಗಿದ್ದರಿಂದ ಈ ಬೆಲೆ. ಕಳೆದ ವರ್ಷ ೧೦-೧೫ ರೂ. ಗೆ ನಿಮ್ಮ ಚೀಲದಲ್ಲಿ ಅವರೆ ಇರುತ್ತಿತ್ತು. ಅಕಾಲಿಕ ಮಳೆ ಮತ್ತಿತರ ಕಾರಣದಿಂದ ಸ್ವಲ್ಪ ದುಬಾರಿಯಂತೆ. ಸಿಪ್ಪೆಯಿಂದ ಕಾಳುಗಳನ್ನು ಬೇರ್ಪಡಿಸುವ ಗೋಜಿಗೆ ಹೋಗಬಾರದೆಂದರೆ ಬಿಡಿಸಿದ ಕಾಳುಗಳೂ ಲಭ್ಯ. ೧ ಲೀಟರ್‌ಗೆ  ೮೦ರೂ., ಚಿತ್‌ಕವರೆ ಇದಕ್ಕಿಂತ ತುಸು ಹೆಚ್ಚು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ