ಬೆಲ್ಲವೇ ಇಲ್ಲ !

ಫಾಲಲೋಚನ ಆರಾಧ್ಯ
ಹತ್ತು ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕಬ್ಬು ಬೆಳೆಯುವವರ ಸಂಖ್ಯೆ ಕುಸಿದಿದೆ. ಆಲೆಮನೆಗಳೂ ಕಡಿಮೆ. ಆದರೆ ಬೆಲ್ಲಕ್ಕೆ ಉತ್ತಮ ಬೆಲೆ.
ಆಲೆಮನೆಗಳಿಗೆ ಕಾರ್ಮಿಕರ ಕೊರತೆ, ಬೆಲ್ಲ ಉತ್ಪಾದನೆಗೆ ತಗುಲುತ್ತಿರುವ ವೆಚ್ಚ ಹಾಗೂ ಬೆಲ್ಲದ ಧಾರಣೆಯಲ್ಲಿ ಸ್ಥಿರತೆ ಇಲ್ಲದಿರುವುದು ಕಬ್ಬಿನ ಉತ್ಪತ್ತಿ ಕಡಿಮೆಗೆ ಕಾರಣ. ಬೆಲ್ಲದ ಹರಾಜಿಗೆ ಚಾ.ನಗರದ ಎಪಿಎಂಸಿ ಕೂಡ ಹೆಸರುವಾಸಿ. ದಶಕಗಳ ಹಿಂದೆ ೧೦ ರಿಂದ ೧೫ ಲಕ್ಷ ಬೆಲ್ಲ ಬರುತ್ತಿದ್ದರೆ, ಈಗ ಕೇವಲ ೪ ಲಕ್ಷ.
ಸುಮಾರು ೧೦ ರಿಂದ ೧೨ ಸಾವಿರ ಹೆಕ್ಟೇರ್ ಪ್ರದೇಶದಿಂದ ೭ ಸಾವಿರಕ್ಕೆ ಬೆಳೆಯುವ ಪ್ರದೇಶವೂ ಕುಸಿದಿದೆ.
ಜಿಲ್ಲೆಯ ಏಕೈಕ ಮಹಾದೇಶ್ವರ ಸಕ್ಕರೆ ಕಾರ್ಖಾನೆಯೂ ಮುಚ್ಚಿದೆ. ಅದೇ ಕಾರ್ಖಾನೆ ಮಾಲೀಕರ ನಂಜನಗೂಡಿನ ಅಳಗಂಚಿಯ ಬಣ್ಣಾರಿ ಕಾರ್ಖಾನೆಗೇ ಕಬ್ಬು ಪೂರೈಸಬೇಕು. ೬.೫೦ ಲಕ್ಷ ಟನ್ ಕಬ್ಬಿನಲ್ಲಿ ಅರ್ಧ ಭಾಗ ಸಕ್ಕರೆ ಕಾರ್ಖಾನೆಗೆ, ಉಳೀದದ್ದು ಆಲೆಮನೆಗೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ