ಇಲ್ಲುಂಟು ಹಿರಿಯ ಠಾಣೆ ರಾಜರ ಕಾಲದಲ್ಲೇ ಮನ್ನಣೆ

ಇಲ್ಲುಂಟು ಹಿರಿಯ ಠಾಣೆ ರಾಜರ ಕಾಲದಲ್ಲೇ ಮನ್ನಣೆ
* ಆರ್.ಕೃಷ್ಣ ಮೈಸೂರು
ಆಳರಸರ ರಾಜಧಾನಿಯಾಗಿದ್ದ ಮೈಸೂರಿನ ಪೊಲೀಸ್ ವ್ಯವಸ್ಥೆ, ಕರ್ನಾಟಕದ ಪೊಲೀಸ್ ಇತಿಹಾಸದಲ್ಲಿಯೇ ವಿಶಿಷ್ಟ ಹಾಗೂ ಅಗ್ರಗಣ್ಯ. ಬ್ರಿಟಿಷರ ಆಗಮನಕ್ಕೂ ಮುನ್ನವೇ ವ್ಯವಸ್ಥೆ ಜಾರಿಯಲ್ಲಿತ್ತು. ಇಂದಿನ ಪೊಲೀಸರು ಮಾಡುತ್ತಿದ್ದ ಕೆಲಸ ವನ್ನು ಆ ಕಾಲಕ್ಕೆ ಗ್ರಾಮಣಿ, ಕಂದಾಚಾರಿ, ಕ್ಷೇಮಪಾಲ ಇನ್ನಿತರ ಹೆಸರಿನಲ್ಲಿ ಕರೆಸಿಕೊಳ್ಳುತ್ತಿದ್ದವರು ನಿರ್ವಹಿಸುತ್ತಿದ್ದರು.
ರಾಜರ ಅಸ್ಥಾನದಲ್ಲಿದ್ದ ಕೊತ್ವಾಲ, ಕರ್ಮಚಾರಿ ಸೈನಿಕ ದಳ ರಾಜರ ಪ್ರತಿಸ್ಪರ್ಧಿಗಳನ್ನು ನಾಶ ಮಾಡಲು ಮಾತ್ರ ಬಳಕೆಯಾಗುತ್ತಿತ್ತು. ಇದು ಕೆಲವೊಮ್ಮೆ  ಪ್ರಜೆಗಳ ಆಕ್ರೋಶಕ್ಕೂ ತುತ್ತಾಗುತ್ತಿತ್ತು. ಬದಲಾದಂತೆ ಈ ಪಡೆಗೆ ಕಳ್ಳತನ-ಕೊಲೆ ಮುಂತಾದ ಅಪರಾಧ ತಡೆಗಟ್ಟಿ ಸಮಾಜದ ಶಾಂತಿ-ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ನೀಡಲಾಯಿತು. ನಂತರ ಆಶ್ವದಳ, ಕರ್ನಾಟಕ ಮತ್ತು ಪಾಶ್ಚಾತ್ಯ ವಾದ್ಯ ಸಂಗೀತ ದಳ, ಅಂಗರಕ್ಷಕ ಪಡೆ, ಫಿರಂಗಿದಳವಾಗಿ ರೂಪುಗೊಂಡಿತು. ಈ ಪಡೆಯ ಸ್ವರೂಪ ರಾಜ್ಯದ ಇತರೆ ಭಾಗಕ್ಕೂ ಮಾದರಿಯಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ