ರಸ್ತೆಗಳು`ಕುಶಲ'ವಾಗಿಲ್ಲ !

ಕುಶಾಲನಗರ ವ್ಯಾಪ್ತಿಯ ರಸ್ತೆಗಳಲ್ಲಿ ಸಂಚರಿಸುವುದು `ಕುಶಲ' ದಾಯಕವಲ್ಲ. ಗುಂಡಿಗಳೇ ತುಂಬಿರುವ ರಸ್ತೆಯಲ್ಲಿ ವಾಹನ ಚಾಲನೆ ಡರ್ಟ್‌ಟ್ರ್ಯಾಕ್ ರೂಟ್‌ನಲ್ಲಿ ರೇಸ್‌ನಲ್ಲಿ ವಾಹನ ಓಡಿಸಿದಂತೆ.
ಮೈಸೂರು-ಮಡಿಕೇರಿ ರಾಜ್ಯ ಹೆದ್ದಾರಿ ಹೊರತುಪಡಿಸಿ ಸುತ್ತಮುತ್ತಲಿನ ರಸ್ತೆಗಳ ಸ್ಥಿತಿ ಶೋಚನೀಯ. ಕೂಡಿಗೆ- ಶಿರಂಗಾಲ ರಸ್ತೆಯೇ ಇಲ್ಲದಂತಾಗಿದೆ.  ಈ ರಸ್ತೆ ಅಭಿವೃದ್ಧಿಗಾಗಿ ಆಗ್ರಹಿಸಿ ಹೋರಾಟ ನಡೆದಿತ್ತು. ಕೋಟಿ- ಕೋಟಿ ಅನುದಾನ ಈ ರಸ್ತೆಗೆ ಮಂಜೂರಾಗಿದೆ ಎಂಬ ಘೋಷಣೆ ಸಿಕ್ಕಿತಷ್ಟೇ. ಕಾಮಗಾರಿ ಸಾಗಲಿಲ್ಲ. ಕುಶಾಲನಗರ- ಸಿದ್ದಾಪುರ ರಸ್ತೆಯ ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡ ಗಳಿವೆ. ದುಬಾರೆ ಆನೆ ತರಬೇತಿ ಶಿಬಿರ, ಚಿಕ್ಲಿಹೊಳೆಗೆ ಸಾಗಲು ಪ್ರವಾಸಿಗರು ಪ್ರಯಾಸ ಪಡಬೇಕು.
ಮುಖ್ಯಮಂತ್ರಿ ಆಗಿದ್ದ ಆರ್. ಗುಂಡೂರಾವ್ ಅವರ ಹುಟ್ಟೂರು ಕುಶಾಲ ನಗರದಲ್ಲಿ ವ್ಯವಸ್ಥಿತವಾದ ರಸ್ತೆಯೇ ಇಲ್ಲ. ಮಧ್ಯಭಾಗದಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪ್ರಸ್ತುತ ನಡೆಯುತ್ತಿದೆ. ಒಳಭಾಗದ ರಸ್ತೆಗಳಲ್ಲಿ ಬರೀ ಕಲ್ಲು. ಇಂಥ ರಸ್ತೆಗಳಲ್ಲಿ ಸಾಗುವುದೆಂದರೆ ಮುಳ್ಳನ್ನು ಚುಚ್ಚಿಸಿಕೊಂಡಂತೆಯೇ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ