ಬಿಜೆಪಿ,ಕಾಂಗ್ರೆಸ್ ಗೆಲ್ಲುವ ಕಸರತ್ತು

ಕೊಳ್ಳೇಗಾಲ ತಾಲೂಕಿನ ಜಿ.ಪಂ. ಕ್ಷೇತ್ರಗಳು
ತಾಲೂಕಿನ ರಾಜಕೀಯ ಚಿತ್ರಣ ಈ ಬಾರಿ ವಿಚಿತ್ರ ತಿರುವು ಪಡೆದುಕೊಂಡಿದೆ. ವಿಧಾನಸಭೆ ಮರು ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದ ಜಿ.ಎನ್.ನಂಜುಂಡಸ್ವಾಮಿ ಅವರು ಸರಕಾರದ ವಿರುದ್ಧ ಬಂಡಾಯವೆದ್ದು, ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ. ಹೀಗಾಗಿ ಅವರ ಬೆಂಬಲ ಪಕ್ಷಕ್ಕಿಲ್ಲ. ಹೀಗಾಗಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ ಸೇರಿದಂತೆ ಇತರರ ಹೆಗಲಿಗೆ ತಾಲೂಕಿನ ಹೊಣೆ ಬಿದ್ದಿದೆ.
ಇದರ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿದೆ. ಹಾಗೆ ನೋಡಿ ದರೆ ಕಳದ ಬಾರಿ ತಾಲೂಕಿನ ೭ ಜಿ.ಪಂ. ಕ್ಷೇತ್ರಗಳಲ್ಲಿ ೫ ಕಾಂಗ್ರೆಸ್, ೨ ಜಾ.ದಳ ಅಭ್ಯರ್ಥಿಗಳು ಆಯ್ಕೆಯಾಗಿ ದ್ದರು. ಈ ಬಾರಿ ಚಿತ್ರಣ ಬದ ಲಾಗಿದ್ದು, ಕಾಂಗ್ರೆಸ್- ಬಿಜೆಪಿ ನಡುವೆ ಹಣಾಹಣಿ ಏರ್ಪ ಟ್ಟಿದೆ. ಅಲ್ಲದೆ ಕೆಲವು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಖಚಿತ. ೭ ಕ್ಷೇತ್ರಗಳಲ್ಲಿ ಕುಂತೂರು ಮಾತ್ರ ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರಕ್ಕೆ ಒಳ ಪಟ್ಟಿದ್ದು, ಉಳಿದ ೬ ಕ್ಷೇತ್ರಗಳು ಹನೂರು ವಿಧಾನಸಭೆ ವ್ಯಾಪ್ತಿ ಯಲ್ಲಿವೆ. ಹೀಗಾಗಿ ಇಲ್ಲಿ ಶಾಸಕ ಆರ್. ನರೇಂದ್ರ ಹಾಗೂ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರಿಗೆ ಪ್ರತಿಷ್ಠೆಯಾಗಿವೆ.
ಕಾಂಗ್ರೆಸ್, ಬಿಜೆಪಿ ಹಾಗೂ ಜಾ.ದಳ ಎಲ್ಲ ೭ ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ೩ ಕ್ಷೇತ್ರಗಳಲ್ಲಿರುವ ಬಿಎಸ್ಪಿ ಅಭ್ಯರ್ಥಿಗಳು ತೀವ್ರ ಪೈಪೋಟಿ ನಡೆಸುವ ಸಾಧ್ಯತೆ ಇದೆ.
ಬಂಡಳ್ಳಿ
ಕಳೆದ ಬಾರಿ ಜಾ.ದಳದಿಂದ ಜಯಶೀಲ ರಾಜಶೇಖರ್ ಆಯ್ಕೆ ಯಾಗಿದ್ದರು. ನಂತರ ಇವರು ಪರಿಮಳಾ ನಾಗಪ್ಪ ಅವ ರೊಂದಿಗೆ ಬಿಜೆಪಿ ಸೇರಿದರು. ಈ ಬಾರಿ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಮೈಮುಲ್ ಮಾಜಿ ಅಧ್ಯಕ್ಷ ಗುರು ಮಲ್ಲಪ್ಪ (ಕಾಂಗ್ರೆಸ್), ನಾಗೇಂದ್ರಮೂರ್ತಿ (ಬಿಜೆಪಿ), ಕಾರ್ತೀಕ್ (ಜೆಡಿಎಸ್) ಹಾಗೂ ಆರ್.ಮಹಾದೇವಸ್ವಾಮಿ (ಬಿಎಸ್‌ಪಿ) ಕೃಷ್ಣಮೂರ್ತಿ ಮತ್ತು ಸಿದ್ದಪ್ಪ (ಪಕ್ಷೇತರರು) ಸ್ಪರ್ಧೆಯಲ್ಲಿದ್ದಾರೆ. ಆದರೆ ನೇರ ಹಣಾಹಣಿ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ. ಶಾಸಕ ಆರ್. ನರೇಂದ್ರ ಹಾಗೂ ಮಾಜಿ ಶಾಸಕಿ ಪರಿಮಳಾ ಅವರಿಗೆ ಈ ಕ್ಷೇತ್ರ ಪ್ರತಿಷ್ಠೆಯಾಗಿದೆ.
ಕುಂತೂರು
ಈ ಹಿಂದೆ ಜಾ.ದಳದ ಶಿವಕುಮಾರ್ ಆಯ್ಕೆಯಾಗಿ ನಂತರ ಕಾಂಗ್ರೆಸ್ ಸೇರ್ಪಡೆಯಾದರು. ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿರುವ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಬಿಎಸ್ಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಕಮಲಮ್ಮ (ಜೆಡಿಎಸ್), ಯಶೋಧಾ ಪ್ರಭುಸ್ವಾಮಿ (ಕಾಂಗ್ರೆಸ್), ರೇಖಾ (ಬಿಎಸ್ಪಿ ), ಜಿ.ಎಂ.ಲತಾ (ಬಿಜೆಪಿ)ಯಿಂದ ಸ್ಪರ್ಧೆಯಲ್ಲಿದ್ದಾರೆ.
ಲೊಕ್ಕನಹಳ್ಳಿ
ಈ ಬಾರಿ ಈ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು ೨೬೦೧೨ ಮತದಾರರಿದ್ದಾರೆ, ಕಳೆದ ಬಾರಿ ಈ ಕ್ಷೇತ್ರದಿಂದ ಕಾಂಗ್ರೆಸ್‌ನ ರಾಧಾಮಣಿ ಆಯ್ಕೆಯಾಗಿದ್ದರು. ಈ ಬಾರಿ ಸಂಸದ ಆರ್.ಧ್ರುವನಾರಾಯಣ್ ಅವರ ಕಟ್ಟಾ ಬೆಂಬಲಿಗ ಕೆ.ಮಹದೇವ (ಕಾಂಗ್ರೆಸ್) ರೇಖಾ (ಬಿಜೆಪಿ) ಎಂ.ಶಿವಣ್ಣ (ಜೆಡಿಎಸ್) ವೀರಭದ್ರನಾಯಕ (ಪಕ್ಷೇತರರಾಗಿ ಕಣದಲ್ಲಿ ದ್ದಾರೆ, ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ