ದಳ್ಳಾಳಿ ಹಾವಳಿ, ಭತ್ತದ ಖರೀದಿ ಕೇಂದ್ರಕ್ಕಾಗಿ ಆಗ್ರಹ


 ವಿಕ ಸುದ್ದಿಲೋಕ ಕೃಷ್ಣರಾಜನಗರ
ತಾಲೂಕಿನ ಕಾವೇರಿ  ನದಿಯ ಎರಡೂ ದಂಡೆಗಳ ಮೇಲೆ ರೈತರು ಬೆಳೆದಿದ್ದ ಹಸಿರಿನಿಂದ ಕಂಗೊಳಿಸುತ್ತಿದ್ದ ಭತ್ತದ ಬೆಳೆಯ ಕಟಾವು ಪ್ರಾರಂಭವಾಗಿದೆ. ಭತ್ತದ ಕಣಜದ ರೈತರು ವರ್ಷದ ಕೂಳು ಕೈಗೆ ಸಿಗುವ ಹಂತದಲ್ಲಿ ಇಡೀ ಕುಟುಂಬ ಗದ್ದೆಯ ಬಯಲಿನಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದಾರೆ.
ವರ್ಷ ಪೂರ್ತಿ ಕಷ್ಟ ಪಟ್ಟು ಬೆಳೆದ ಬೆಳೆ ಕೈಗೆ ಬಂದಿದ್ದು ವರ್ಷದ ಕೂಳು ಮನೆಗೆ ತರುವ ಸಂತಸದಲ್ಲಿ ತಾಲೂಕಿನ ಎಲ್ಲೆಡೆ ರೈತರು ತಮ್ಮ ಜೀವನಾಡಿಗಳೆನಿಸಿದ ಹಸು ಎತ್ತುಗಳೊಂದಿಗೆ ದಿನ ನಿತ್ಯದ ಇತರ ಜಂಜಾಟಗಳನ್ನು ಮರೆತು ಇಡೀ ದಿನವನ್ನು ಭತ್ತದ ಬಯಲಿನಲ್ಲಿ ಕಳೆಯುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ