ಮಾರುಕಟ್ಟೆಗಳಿಗೆ ಮರು ಜೀವ

ವಿಕ ವಿಶೇಷ ಮೈಸೂರು
ನಗರದ ಮೂರು ಮಾರುಕಟ್ಟೆಗಳನ್ನು ಖಾಸಗಿ ಸಂಸ್ಥೆಗಳ ನೆರವಿ ನೊಂದಿಗೆ ಪಿಪಿಪಿ(ಪಬ್ಲಿಕ್-ಪ್ರೈವೇಟ್ ಪಾಟ್ನರ್‌ಶಿಪ್) ಮಾದರಿ ಯಲ್ಲಿ ಹೊಸದಾಗಿ ನಿರ್ಮಿಸಲು ಪಾಲಿಕೆ ಚಿಂತನೆ ನಡೆಸಿದೆ.
ಹೃದಯ ಭಾಗದ ದೇವರಾಜ ಮಾರುಕಟ್ಟೆ , ಅಗ್ರಹಾರ ವೃತ್ತದ ವಾಣಿ ವಿಲಾಸ ಮಾರುಕಟ್ಟೆ ಹಾಗೂ ಮಂಡಿ ಮೊಹಲ್ಲಾದ ಮಂಡಿ ಮಾರುಕಟ್ಟೆಯನ್ನು ಅವುಗಳ ಪಾರಂಪರಿಕತೆಗೆ ತಕ್ಕಂತೆ, ಹೊಸದಾಗಿ ನಿರ್ಮಿಸುವ ಆಲೋಚನೆಗೆ ಮತ್ತೆ ಜೀವ ಬಂದಿದೆ.
ಜವಾಹರ್‌ಲಾಲ್ ನೆಹರು ರಾಷ್ಟ್ರೀಯ ನಗರ ಪುನರುಜ್ಜೀವನ ಯೋಜನೆ(ಜೆಎನ್-ನರ್ಮ್)ಯಡಿ ದೇವರಾಜ ಮಾರುಕಟ್ಟೆ ಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿತ್ತು. ಆದರೆ, ಈಗ ಏಕಾಏಕಿ ನರ್ಮ್ ಯೋಜನೆಯನ್ನು ಮರೆತು, ಪಿಪಿಪಿ ಮಾದರಿಯ ಮಾತುಗಳನ್ನು ಆಡುತ್ತಿರುವುದು ವಿಶೇಷ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ