ಗಜಗಳ ಚಿನ್ನಾಟ

ವಿಕ ಸುದ್ದಿಲೋಕ ಗುಡ್ಡೆಹೊಸೂರು
ಮಾವುತ-ಕಾವಾಡಿಗಳು ಅಂಕುಶ ಹಿಡಿದು ಪಳಗಿಸಿದ ಸಾಕಾನೆಗಳು ಬುಧವಾರ ಪ್ರದರ್ಶನ ನೀಡಿದ ವಿವಿಧ ಕಸರತ್ತು ನೂರಾರು ಸಂಖ್ಯೆ ಯಲ್ಲಿ ಸೇರಿದ್ದ ಪ್ರೇಕ್ಷಕರನ್ನು ರಂಜಿಸಿತು.
ದುಬಾರೆ ಆನೆ ತರಬೇತಿ ಶಿಬಿರದಲ್ಲಿ ಅರಣ್ಯ ಇಲಾಖೆ ಮಡಿಕೇರಿ ವಿಭಾಗದಿಂದ ನಡೆದ `ಆನೆ ಹಬ್ಬ' ದಲ್ಲಿ ಸಾಕಾನೆಗಳ ಕಲಿಕೆ ಅನಾವರಣಗೊಂಡಿತು.
೫೬ನೇ ವನ್ಯಜೀವಿ ಸಪ್ತಾಹದ ಪ್ರಯುಕ್ತ ದುಬಾರೆಯಲ್ಲಿ ಆನೆ ಹಬ್ಬ ಆಯೋಜಿಸಲಾಗಿತ್ತು. ಕಳೆದ ವರ್ಷ ಈ ಕಾರ್ಯಕ್ರಮಕ್ಕೆ ಪ್ರಪ್ರಥಮ ವಾಗಿ ಚಾಲನೆ ನೀಡಲಾಗಿತ್ತು. ಕ್ಯಾಂಪ್‌ನಲ್ಲಿರುವ ಸಾಕಾನೆಗಳನ್ನು ಕಾವೇರಿ ನದಿಯಲ್ಲಿ ಸ್ನಾನ ಮಾಡಿಸಿ, ಪೂಜೆ ಸಲ್ಲಿಸಲಾಯಿತು. ಬಣ್ಣಗಳಿಂದ ಅಲಂಕರಿಸಲಾಗಿತ್ತು.
ಮುಕ್ಕಾಲು ಗಂಟೆ (೧೧ ರಿಂದ ೧೧.೪೫) ಗಳ ಕಾಲ ಸಾಕಾನೆಗಳು ತಮ್ಮ ಕಲಿಕೆ ಪ್ರದರ್ಶಿಸಿದವು. ೯ವರ್ಷದ ಶಿವಗಂಗೆ, ೧೨ ರ ರಂಜನ್ ಹಾಗೂ ೭ರ  ಪರಶುರಾಮ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಮಿಂಚಿದವು. ಹಿರಿಯ ಮಾವುತ ಜೆ.ಕೆ.ಡೋಬಿ ಮುಂದಾಳತ್ವದಲ್ಲಿ ಮಾವುತ- ಕಾವಾಡಿಗಳ ನಿರ್ದೇಶನದಂತೆ ಸಾಕಾನೆಗಳು ಪ್ರದರ್ಶನ ನೀಡಿದವು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ