ಹೆಸರಿಗೆ ಮಾತ್ರ ರಾಷ್ಟ್ರೀಯ ಹೆದ್ದಾರಿ !

ಗುರುಸ್ವಾಮಿ ಕೊಳ್ಳೇಗಾಲ
ತಾಲೂಕಿಗೆ ಸೇರಿದ ೧೨ ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ (೨೧೨) ನವೀಕರಣ ಮುಗಿದು ೧೦ ತಿಂಗಳೂ ಕಳೆದಿಲ್ಲ. ಆದರೆ ವಾಹನ ಗಳು ಸಂಚರಿಸಲು ಸರ್ಕಸ್ ಮಾಡಬೇಕು.
ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ನುಣುಪಾಗಿದ್ದರೆ ಇದರ ಸ್ಥಿತಿ ಚಿಂತಾಜನಕ. ರಸ್ತೆಯಲ್ಲೆಲ್ಲ ಮಂಡಿ ಯುದ್ದದ ಹೊಂಡ, ಅಲ್ಲಲ್ಲಿ ಡಾಂಬರು ಕಿತ್ತು ಹೋಗಿದ್ದು, ಕೆಸರು ಗದ್ದೆಯಾಗಿದೆ. ರಸ್ತೆ ಬದಿ ನಡೆಯುವವರಿಗೆ ಕೆಸರಿನ ಸ್ನಾನ ತಪ್ಪಿದ್ದಲ್ಲ.
ಕೊಳ್ಳೇಗಾಲದ ಬಳಿಯ ಉತ್ತಂಬಳ್ಳಿ ಸಮೀಪದಿಂದ ಹೆದ್ದಾರಿ (೨೧೨) ಆರಂಭ. ಟಗರಪುರ ಬಳಿಯ ಚಾಮರಾಜ ನಗರ- ನರಸೀ ಪುರ ಮುಖ್ಯ ರಸ್ತೆ ಬಳಿ ಕೊನೆಗೊಳ್ಳು ತ್ತದೆ. ನಂತರ ಹೆದ್ದಾರಿ ನರಸೀಪುರ ಮಾರ್ಗ ವಾಗಿ, ಮೈಸೂರಿ ನತ್ತ ಹಾದುಹೋಗಿದೆ.
ತಾಂತ್ರಿಕತೆ ಬಳಸಿಲ್ಲ : ೧೨ ಕಿ.ಮೀ. ಉದ್ದಕ್ಕೂ ಹೆದ್ದಾರಿ ಗದ್ದೆಗಳ ಮಧ್ಯೆ ಹಾದುಹೋಗಿದೆ. ಈ ಮಾರ್ಗದಲ್ಲಿ ಉತ್ತಂಬಳ್ಳಿ, ಕುಂತೂರು, ಚಿಲಕವಾಡಿ, ಟಗರಪುರ ಮತ್ತು ಟಗರುಪುರ ಮೋಳೆ ಗ್ರಾಮ ಗಳಿವೆ. ಇದು ಕಪ್ಪು ಮಣ್ಣಿನ ಜೌಗು ಪ್ರದೇಶ. ಇಲ್ಲಿ ರಸ್ತೆ ನಿರ್ಮಾಣಕ್ಕೆ ಬಳಸುವ ತಾಂತ್ರಿಕತೆ ಬಳಸಿಯೇ ಇಲ್ಲ. ಹಾಗಾಗಿ ರಸ್ತೆ ಹಾಳು, ದುಡ್ಡೂ ಹಾಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ