ಅರವಿಂದ ನಾವಡ ಮೈಸೂರು
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕ ಹಿನ್ನೆಲೆಯಲ್ಲಿ ರೂಪುಗೊಂಡ `ಸವಿವರ ಯೋಜನಾ ವರದಿ' ಕೇಂದ್ರ ಯೋಜನಾ ಆಯೋಗದ ಅಂಕಿತಕ್ಕೆ ಕಾಯುತ್ತಿದೆ.
ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ `ಶಾಸ್ತ್ರೀಯ ಭಾಷೆ ಅಭಿವೃದ್ಧಿ ಮಂಡಳಿ' ವಿಭಾಗವು ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದಂತೆ ನಾನಾ ವಿದ್ವಾಂಸರ ಸಭೆ ನಡೆಸಿ ಪಡೆದ ಶಿಫಾರಸುಗಳನ್ನು ಆಧರಿಸಿ ಯೋಜನಾ ವರದಿಯನ್ನು ತಯಾರಿಸಿತ್ತು. ಆಗಸ್ಟ್ನಲ್ಲಿ ದಿಲ್ಲಿಯ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಭಾಷಾ ವಿಭಾಗಕ್ಕೆ ಕಳುಹಿಸಲಾಗಿದೆ. ಅದೀಗ ಯೋಜನಾ ಆಯೋಗದ ಪರಿಶೀಲನೆಯ ನಿರೀಕ್ಷೆಯಲ್ಲಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ