ದಸರೆಗೊಂದು ಪ್ರಾಧಿಕಾರ ಬೇಕು, ಅದಕ್ಕೊಂದು ಸ್ಪಷ್ಟ ರೂಪ ಕೊಡಬೇಕು...

ವಿಶ್ವಪ್ರಸಿದ್ಧ ಜಂಬೂಸವಾರಿ ಮುಗಿದು ತಿಂಗಳಷ್ಟೇ ಆಗಿದೆ. ಇಂಥ ಹಬ್ಬಕ್ಕೆ ಭಿನ್ನ ಮಾರ್ಗ ಬೇಕು ಎನ್ನುವ ಚಿಂತನೆ, ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಆಡಳಿತಜ್ಞರು, ಸಾಧಕರು, ಗಣ್ಯರು, ಸಾರ್ವಜನಿಕರು, ದಸರೆಯನ್ನು ಪ್ರೀತಿಸು ವವರು...
ದಸರೆ ಪ್ರಾಧಿಕಾರ ಏಕೆ ಬೇಕು ಎನ್ನುವ ಆಶಯದೊಂದಿಗೆ ವಿಜಯಕರ್ನಾಟಕ ಆರಂಭಿಸಿದ ಅಭಿಯಾನ ಅಂತಿಮ ಹಂತಕ್ಕೆ ಬಂದಿದೆ. ದಸರೆ ಪ್ರಾಧಿಕಾರ ಏಕೆ ಬೇಕು ಎನ್ನುವುದಕ್ಕೆ ಹಲವರು ತಮ್ಮ ಅಭಿಪ್ರಾಯಗಳ ಮೂಲಕ ವಿಷದಪಡಿಸಿದ್ದಾರೆ.
ಅಕ್ಟೋಬರ್ ೨೬ರಂದು ಆರಂಭಗೊಂಡಿದ್ದು ಅಭಿಯಾನ. ನಿತ್ಯ ನಾಲ್ಕು ಮಂದಿ ವಿಭಿನ್ನ ಕ್ಷೇತ್ರದ ೩೧ ಮಂದಿ ಅಭಿಪ್ರಾಯಗಳು ೧೬ ದಿನಗಳ ಅವಧಿಯಲ್ಲಿ ಪ್ರಕಟವಾದವು. ಇದರಲ್ಲಿ ದಸರೆಯ ಉಸ್ತುವಾರಿ ಹೊತ್ತ ರಾಜಕೀಯ ಧುರೀಣರು, ಅಧಿಕಾರಿಗಳು, ದಸರೆಯ ಭಾಗವಾಗಿಕೊಂಡು ಬಂದ ಗಣ್ಯರು ಮುಕ್ತವಾಗಿ ಮಾತನಾಡಿದರು.
ನಾಡಹಬ್ಬವೆನ್ನುವುದು ಕಾಟಾಚಾರದ ಉತ್ಸವವಾಗಬಾರದು. ದಸರೆ ಮೂಲಕ ಮೈಸೂರಿನ ಅಭಿವೃದ್ಧಿಗೆ ಅವಕಾಶವಾಗಬೇಕು. ಅದಕ್ಕೊಂದು ರೂಪ ಸಿಗುವಂತಾಗಬೇಕು. ರೂಪ ನೀಡಲು ಸಂಸ್ಥೆ ಯೊಂದು ಬೇಕೇ ಬೇಕು ಎನ್ನುವುದು ಬಹುತೇಕರ ಅಭಿಪ್ರಾಯ ವಾಗಿತ್ತು. ಈ ನಿಟ್ಟಿನಲ್ಲಿ ದಸರೆ ಪ್ರಾಧಿಕಾರ ರಚನೆಗೆ ಇದು ಸಕಾಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ