ವೈಶಿಷ್ಟ್ಯಪೂರ್ಣ ಅಕ್ಕಿ ಆಹಾರ ಸಂಸ್ಕೃತಿ ಮೇಳ

ವಿಕ ಸುದ್ದಿಲೋಕ ಮೈಸೂರು
ನಗರದ ಸಾವಯವ ಸಂಘಟನೆಗಳ ನೇತೃತ್ವದಲ್ಲಿ `ಕಿಸಾನ್ ಸ್ವರಾಜ್ ಯಾತ್ರೆ' ಅಂಗವಾಗಿ ಆಯೋಜಿಸಲಾಗಿದ್ದ `ಅಕ್ಕಿ ಆಹಾರ ಸಂಸ್ಕೃತಿ ಮೇಳ' ವೈಶಿಷ್ಟ್ಯ ಪೂರ್ಣ ವಾಗಿ ಮಂಗಳವಾರ ನಡೆಯಿತು.
ರಂಗಾಯಣದ ವನರಂಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸಿರು ವಸ್ತ್ರದಲ್ಲಿ ದೇಸಿ ಕೆಂಪಕ್ಕಿಯನ್ನು ನೀಡುವ ಮೂಲಕ ಅತಿಥಿ ಗಳನ್ನು ಸ್ವಾಗತಿಸಲಾಯಿತು. ಬತ್ತದ ತೆನೆಯ ತೋರಣದಿಂದ ಸಿಂಗರಿಸಿದ್ದ ವೇದಿಕೆಯ ರಂಗವಲ್ಲಿ ಇಟ್ಟ ಅಂಗಳದಲ್ಲಿ ಪುಟ್ಟ ಬತ್ತದ ರಾಶಿಯ ನಡುವೆ ಕೊಳಗದಲ್ಲಿ ತುಂಬಿಟ್ಟ ಬತ್ತವನ್ನು ಒನಕೆಯಿಂದ ಕುಟ್ಟುವ ಮೂಲಕ ರಾಜ್ಯ ರೈತ ಸಂಘದ ಮುಖಂಡ ನಂಜುಂಡೇಗೌಡ ಮೇಳ ಉದ್ಘಾಟಿಸಿದರು. ಉಗ್ರನರಸಿಂಹೇಗೌಡ, ಗುರುಪ್ರಸಾದ್, ಬರ್ಟಿ ಒಲಿವರಾ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ