ಬಡಾವಣೆ ಕಡೆ ಮುಖಮಾಡದ ಪೊಲೀಸರು

ವಿಕ ಸುದ್ದಿಲೋಕ ಮೈಸೂರು
ಬಡಾವಣೆಗಳನ್ನು ದತ್ತು ತೆಗೆದುಕೊಂಡ ಪೊಲೀಸರಿಗೆ ಅತ್ತ ಹೋಗಲು ಸಮಯವೇ ಇಲ್ಲ !.
ಜನ ಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುವ ಕ್ರಮವಾಗಿ ನಗರ ಪೊಲೀಸ್ ಆಯುಕ್ತರು ಆರಂಭಿಸಿದ ‘ಬಡಾವಣೆ ದತ್ತು’ ಯೋಜನೆಗೆ ಗ್ರಹಣ ಹಿಡಿದಿದೆ.
ದಸರೆ ಸೇರಿದಂತೆ ನಾನಾ ಭದ್ರತೆ ಕಾರಣಗಳಿಗೆ ಪೊಲೀಸ್ ಅಧಿಕಾರಿಗಳು ತೊಡಗಿಕೊಂಡಿದ್ದರಿಂದ ಬಡಾವಣೆಗಳ ಕಡೆಗೆ ಮುಖ ಮಾಡಲು ಆಗಿಲ್ಲ.
ಏಳು ತಿಂಗಳ ಹಿಂದೆ ಮಹತ್ವದ ಯೋಜನೆಯೇನೋ ಆರಂಭವಾಯಿತು. ಮೂರ‍್ನಾಲ್ಕು ತಿಂಗಳು ಪ್ರತಿ ಠಾಣೆ ಯವರು ಆಗಾಗ ಬಡಾವಣೆಗಳಿಗೆ ಭೇಟಿ ನೀಡಿ ಸ್ಥಳೀಯ ರೊಂದಿಗೆ ಬೆರೆತು ಅಹವಾಲು ಆಲಿಸಿದರು. ಕೆಲವರು ಸಣ್ಣಪುಟ್ಟ ಸವಲತ್ತನ್ನೂ ವಿತರಿಸಿದರು. ಮೂರು ತಿಂಗಳಿನಿಂದ ಬಹುತೇಕ ಠಾಣೆಯವರು ತಾವು ದತ್ತು ಪಡೆದ ಬಡಾವಣೆಗಳನ್ನು ಮರೆತೇ ಬಿಟ್ಟಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ