ಹರ ಹರಾ ಮಹಾದೇವಾ!

ತಿ.ನರಸೀಪುರದಲ್ಲಿ ರಸ್ತೆಯಲ್ಲಿ ಹೊಂಡವಿದೆ ಎನ್ನುವುದಕ್ಕಿಂತ ಹೊಂಡಗಳ ನಡುವೆ ರಸ್ತೆಯನ್ನು ಹುಡುಕಿಕೊಳ್ಳಿ ಎನ್ನುವುದೇ ಸೂಕ್ತ . ಹಿಂದುಳಿದ ತಾಲೂಕು ಕೇಂದ್ರದಲ್ಲಿ ರಸ್ತೆ ಅಭಿವೃದ್ಧಿ ಏಕೆ ಎಂಬುದು ಅಧಿಕಾರಸ್ಥರ ಮನಸ್ಥಿತಿಯಿದ್ದಂತಿದೆ.
ಪಟ್ಟಣದ ಒಂದು ರಸ್ತೆಯೂ ನೆಟ್ಟಗಿಲ್ಲ. ಕೆಲವೆಡೆ  ಚರಂಡಿ ನೀರು ಹರಿಯಲು ಡಾಂಬರು ರಸ್ತೆಯನ್ನೇ ಅಗೆಯಲಾಗಿದೆ. ಲಿಂಕ್‌ರಸ್ತೆಯಲ್ಲಿ ಹಳ್ಳಗಳಿಗೆ ಲಿಂಕ್ ಸಿಗಲಿದೆ. ಮಾರುಕಟ್ಟೆ ರಸ್ತೆ, ರೇಷ್ಮೆ ಗೂಡಿನ ಮಾರುಕಟ್ಟೆ ಮುಂದಿನ ರಸ್ತೆ ಹಳ್ಳಗಳ ಆವಾಸ ಸ್ಥಾನವಾಗಿದೆ.
ತಾಲೂಕು ಕಚೇರಿ ರಸ್ತೆಯೂ  ಹಳ್ಳಗಳಿಂದ ಮುಕ್ತ ವಾಗಿಲ್ಲ.ಗಹಮಂಡಳಿ ಕಾಲೋನಿಯಲ್ಲಿ ಮಳೆ ಸುರಿದಾಗ ಕಪ್ಪು ಮಣ್ಣಿನ ರಸ್ತೆಯಲ್ಲಿ ಸಂಚಾರ ದುಸ್ತರ. ವಿವೇಕಾನಂದ ನಗರ, ತ್ರಿವೇಣಿ ನಗರ, ಬೈರಾಪುರದಲ್ಲಿ ರಸ್ತೆಗಳು ರಸ್ತೆಗಳಾಗಿ ಉಳಿದಿಲ್ಲ.  ಆಡಳಿತ ಕೇಂದ್ರ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಮಳೆ ಬಂದಾಗ ಮಿನಿ ಕೆರೆ ನಿರ್ಮಾಣವಾಗುತ್ತದೆ. ಇನ್ನು ವಿದ್ಯೋದಯ ಕಾಲೇಜು ವೃತ್ತದಿಂದ ಹೊಸ ತಿರುಮಕೂಡಲು ವೃತ್ತದವರೆಗೆ ಪ್ರಗತಿಯಲ್ಲಿ ರುವ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿ ಜನರನ್ನು ಹೈರಾಣಾಗಿಸಿದೆ. ಮಳೆ ಬಿದ್ದಾಗ ಈ ರಸ್ತೆಗಳಲ್ಲಿ ಸಂಚರಿಸಲು ಪ್ರಯಾಸಪಡಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ