‘ಮಹಾದೇವ’ನೇ ಕಾಪಾಡಬೇಕು


ಐತಿಹಾಸಿಕ ಮಹತ್ವ ಹೊಂದಿರುವ ಬನ್ನೂರು ಪಟ್ಟಣ ವ್ಯಾಸರಾಯರ ಜನ್ಮಸ್ಥಳವೂ ಹೌದು.ಈ ಹಿಂದೆ ವಿಧಾನಸಭೆ ಕ್ಷೇತ್ರವಾಗಿದ್ದ ಬನ್ನೂರನ್ನು ಕಳೆದ ಬಾರಿ ತಿ.ನರಸೀಪುರ ಕ್ಷೇತ್ರದ ಜತೆ ಸೇರ್ಪಡೆಗೊಳಿಸಲಾಗಿದೆ. ಡಾ.ಎಚ್.ಸಿ.ಮಹದೇವಪ್ಪ ಕ್ಷೇತ್ರದ ಶಾಸಕ. ಪುರಸಭೆಯಾಗಿರುವ ಬನ್ನೂರು ಅಭಿವೃದ್ಧಿಯ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ. ಪಟ್ಟಣದ ತೇರು ಎಳೆಯುವ ರಸ್ತೆ, ಪೊಲೀಸ್ ಠಾಣೆ ರಸ್ತೆ, ಮೈಸೂರು- ಮಳವಳ್ಳಿ ರಾಜ್ಯ ಹೆದ್ದಾರಿಗಳು ಹೊಂಡಗುಂಡಿಗಳಿಂದ ತುಂಬಿದ್ದು, ವಾಹನ ಸವಾರರು ತೊಂದರೆಪಡುವಂತಾಗಿದೆ. ಮಳೆ ಬಂತೆಂದರೆ ರಸ್ತೆಗಳು ಕೆಸರುಮಯ. ಪಾದಚಾರಿಗಳಿಗೆ ಕೆಸರಿನ ಅಭಿಷೇಕ. ಮೂಲ ಸೌಲಭ್ಯವಂಚಿತ ಆಶ್ರಯ ಬಡಾವಣೆ ಮುಖ್ಯರಸ್ತೆ ಮಿನಿಕೆರೆಯಂತಾಗಿದೆ. ಬೋವಿ ಕಾಲೋನಿ ಮೂಲಕ ವಿವೇಕಾನಂದ ಶಿಕ್ಷಣ ಸಂಸ್ಥೆಗೆ ಹೋಗುವ ರಸ್ತೆ ತುಂಬಾ ಹಳ್ಳಕೊಳ್ಳಗಳು. ಮಳೆ ಬಂದಾಗ ವಿದ್ಯಾರ್ಥಿಗಳು, ಸಾರ್ವಜನಿಕರು ಈ ರಸ್ತೆಯಲ್ಲಿ ಮನೆ ಸೇರಲು ಪರಡಾಡಬೇಕು. ಪರಸಭೆಯಾಗಲೀ, ಶಾಸಕರಾಗಲಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ