ಮಳೆ ಬಾರದಿದ್ದಾಗಲೂ ನಷ್ಟ, ಬಂದಾಗಲೂ ನಷ್ಟ

ಫಾಲಲೋಚನ ಆರಾಧ್ಯ ಚಾಮರಾಜನಗರ
ಜಿಲ್ಲೆಯ ರೈತರಿಗೆ  ಈ ವರ್ಷ ಮಳೆ ಬಾರದಿದ್ದಾಗಲೂ ನಷ್ಟ. ಮಳೆ ಬಂದಾಗಲೂ ನಷ್ಟ  !
ಒಮ್ಮೆ ಕೈಕೊಟ್ಟ ವರುಣ, ಮತ್ತೊಮ್ಮೆ ಅಗತ್ಯಕ್ಕಿಂತ ಹೆಚ್ಚಾಗಿ ಅಬ್ಬರಿಸಿ ರೈತರ ಬೆಳೆ ನಷ್ಟಕ್ಕೆ ಕಾರಣನಾಗಿದ್ದಾನೆ. ಕಳೆದ ವರ್ಷ `ಬರ'ದಿಂದ ತತ್ತರಿಸಿದ್ದ ರೈತರು ಈ ಬಾರಿ ಮಳೆ ಅಬ್ಬರಕ್ಕೆ ನಲುಗಿದ್ದಾರೆ.
ಜಿಲ್ಲೆಯಲ್ಲಿ ಪೂರ್ವ ಮುಂಗಾರು ರೈತನ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಈ ಖುಷಿಯಲ್ಲಿ ರೈತರು ಜೋಳ, ಸೂರ್ಯಕಾಂತಿ ಹಾಗೂ ನೆಲಗಡಲೆಯನ್ನು  ಹೆಚ್ಚಾಗಿ ಬಿತ್ತನೆ ಮಾಡಿದ್ದರು. ಆದರೆ, ನಂತರದ ಮುಂಗಾರು  ಜೋಳ ಕಾಳು ಕಟ್ಟುವ ಹಂತದಲ್ಲೇ ಕೈಕೊಟ್ಟಿತು. ಈ ಬಾರಿ ಒಟ್ಟಾರೆ ವಾಡಿಕೆಗಿಂತ ಹೆಚ್ಚಿನ ಮಳೆ ಬಿತ್ತಾದರೂ ನಿರ್ಣಾಯಕ ಹಂತದಲ್ಲಿ ಕೈಕೊಟ್ಟದ್ದು, ಬೆಳೆಯ ಮೇಲೆ ಪರಿಣಾಮ ಬೀರಿತು.
ಜಿಲ್ಲೆಯ ರೈತರ ೧೯೨೨ ಹೆಕ್ಟೇರ್ ಪ್ರದೇಶದಲ್ಲಿ ಹೈಬ್ರಿಡ್ ಜೋಳ, ೨೯೬೩ ಹೆಕ್ಟೇರ್‌ನಲ್ಲಿ ಸ್ಥಳೀಯ ಜೋಳ, ೩೨೫೦ ಹೆಕ್ಟೇರ್ ವ್ಯಾಪ್ತಿಯಲ್ಲಿ ಸೂರ್ಯಕಾಂತಿ ಹಾಗೂ ೧೬೩೨ ಹೆಕ್ಟೇರ್‌ನಲ್ಲಿ ನೆಲಗಡಲೆ ನಷ್ಟಕ್ಕೆ ಒಳಗಾಗಿದೆ. ಒಟ್ಟಾರೆ ನಿರ್ಣಾಯಕ ಹಂತದಲ್ಲೇ ಮುಂಗಾರು ಕೈಕೊಟ್ಟ ಪರಿಣಾಮ ಸುಮಾರು ೯೭೬೮ ಹೆಕ್ಟೇರ್ ಪ್ರದೇಶದ ಬೆಳೆ ನಷ್ಟವಾಗಿದೆ. ಇದರಿಂದ ಹಾನಿಗೊಳಗಾದ ಬೆಳೆಯ ಮೌಲ್ಯ ೩.೧೦ ಕೋಟಿ ರೂ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ