ಆಗ ವ್ಯವಸ್ಥಿತ ಪಟ್ಟಣ, ಈಗ ಅವ್ಯವಸ್ಥೆಗಳ ತಾಣ

ಮೈಸೂರು ಮಹಾರಾಜರ ಕಾಲದಲ್ಲಿ ಸ್ಥಾಪಿತವಾಗಿ ವ್ಯವಸ್ಥಿತ ನಗರವೆನಿಸಿಕೊಂಡ ಕೃಷ್ಣರಾಜನಗರಕ್ಕೆ ಅಮೃತ ಮಹೋತ್ಸವ ಸಂಭ್ರಮ. ಆದರೆ, ರಸ್ತೆಗಳೇ ಸರಿ ಇಲ್ಲ. ಮಹಾರಾಜರ ಕಾಲದಲ್ಲಿ ಎಷ್ಟು ವ್ಯವಸ್ಥಿತವಾಗಿತ್ತೋ ಈಗ ಅಷ್ಟೇ ಅಸ್ತವ್ಯಸ್ತ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಪಾರವೇ ಇಲ್ಲ. ಪಟ್ಟಣದ ಪ್ರಮುಖ ರಸ್ತೆಗಳಾದ ಹಾಸನ-ಮೈಸೂರು ರಸ್ತೆ, ಕಂಠೇನಹಳ್ಳಿಯ ಬೈಪಾಸ್ ರಸ್ತೆ, ಬಜಾರ್ ರಸ್ತೆ, ಸಿ.ಎಂ.ರಸ್ತೆ ಸೇರಿದಂತೆ ಇನ್ನಿತರ ರಸ್ತೆಗಳಲ್ಲಿ ಓಡಾಡುವಂತೆಯೇ ಇಲ್ಲ. ಪರಿಣಾಮ ವಾಹನ ಸವಾರರಿಗೆ ಯಮಯಾತನೆ. ಹಲವೆಡೆ ರಸ್ತೆಗಳು ಕೆಸರು ಗದ್ದೆಯಾಗಿದ್ದರೆ, ಇನ್ನು ಕೆಲವೆಡೆ ಬರೀ ಹೊಂಡ. ಇಂಥ ರಸ್ತೆಯಲ್ಲಿ ಓಡಾಡೋದು ಹೇಗೆ ಎಂದು ಪ್ರಶ್ನಿಸುತ್ತಾರೆ ಪಟ್ಟಣದ ಹಿರಿಯ ನಾಗರಿಕರು ಮತ್ತು ಚಿಂತಕರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ