'ಬಣ'(ಣ್ಣ) ಬದಲಿಸಿದ ರಾಮದಾಸ್?

 ವಿಕ ಸುದ್ದಿಲೋಕ ಮೈಸೂರು
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಅವರು ಸಂಕಷ್ಟ ಕಾಲದಲ್ಲಿ ಪ್ರದರ್ಶಿಸಿದ ರಾಜಕೀಯ ನಡೆ ಕುತೂಹಲ ಕೆರಳಿಸಿದೆ.
ಈ ಬಗ್ಗೆ ಜಿಲ್ಲೆಯ ಬಿಜೆಪಿ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಯಡಿಯೂರಪ್ಪ ಅವರ ಮುಖ್ಯಮಂತ್ರಿಗಾದಿ ಅಲುಗಾಡಿದ ಸಂದರ್ಭ ದಲ್ಲಿ, ಸಚಿವ ರಾಮದಾಸ್ ವಹಿಸಿದ ಪಾತ್ರ, ಅವರೆಡೆಗೆ ತೋರಿದ ವಿಪರೀತ ಸ್ವಾಮಿ ನಿಷ್ಠೆ- ಎರಡೂ ಸಹಜವಾಗಿಯೇ ಕೆಲ ಪ್ರಶ್ನೆಗಳನ್ನು ಸೃಷ್ಟಿಸಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದಿಲ್ಲಿಯಾತ್ರೆಯ ಸಂದರ್ಭದಲ್ಲಿ ರಾಮದಾಸ್ ಅವರೊಂದಿಗೆ ಕಾಣಿಸಿಕೊಂಡಿದ್ದು, ಯಡಿಯೂರಪ್ಪ ಅವರೇ ನಮ್ಮ ನಾಯಕ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವುದು ಹಲವರ ಹುಬ್ಬೇರಿಸಿದೆ.
ಶೋಭಾ ಕರಂದ್ಲಾಜೆ, ಸಿ.ಎಚ್. ವಿಜಯಶಂಕರ್ ಅವರಂಥ ಯಡಿಯೂರಪ್ಪ ಪರಮಾಪ್ತರೇ ರಾಜ್ಯ ದಲ್ಲಿ ಉಳಿದು, ಏನೂ ಆಗಿಲ್ಲ ಎಂಬಂತೆ ಇಲಾಖೆಯ ಚಟುವಟಿಕೆಗಳಲ್ಲಿ ಮುಳುಗಿದ್ದಾಗ ರಾಮದಾಸ್ ಅವರೇಕೆ ಇಷ್ಟೊಂದು ಮುತುವರ್ಜಿ ವಹಿಸಿದರು? ಎಂಬುದು ಕಾರ್ಯಕರ್ತರ ತಲೆ ಕೆಡಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ