ಈ ಮೌಢ್ಯ ಕಳೆಯೋಲ್ಲ, ಚಾ.ನಗರಕ್ಕೆ ಸಿಎಂ ಬರೋಲ್ಲ

ವಿಕ ವಿಶೇಷ ಚಾಮರಾಜನಗರ
ನೀವು ಏನೇ ಹೇಳಿ, ಈಗಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಚಾಮರಾಜ ನಗರಕ್ಕೆ ಬರದೇ ತಪ್ಪಿಸಿಕೊಂಡರು !
`ಭಾಗ್ಯಲಕ್ಷ್ಮಿ' ತಾಯಂದಿರಿಗೆ ಸೀರೆ ವಿತರಿಸುವ ಕಾರ್ಯಕ್ರಮವನ್ನು ಗುಂಡ್ಲುಪೇಟೆಯಲ್ಲಿ ನಿಗದಿ ಪಡಿಸಿದ ಬೆನ್ನಲ್ಲೇ ಜಿಲ್ಲೆಯ ಜನರಲ್ಲಿ ಚರ್ಚೆಯಾಗು ತ್ತಿರುವ ಸಂಗತಿ ಇದು. ಐದು ದಿನಗಳಿಂದ ವ್ಯಾಪಕ ಚರ್ಚೆಗೊಳಗಾಗುತ್ತಿರುವುದಲ್ಲದೇ, ಮುಖ್ಯಮಂತ್ರಿ ಯವರ ನಿಲುವಿಗೆ ವಿರೋಧವೂ ಕೇಳಿಬರುತ್ತಿದೆ.
ವಿಚಿತ್ರವೆಂದರೆ ಗುಂಡ್ಲುಪೇಟೆಯಲ್ಲಿ ನ. ೧೫ ರಂದು ನಿಗದಿಯಾಗಿರುವ ಕಾರ್‍ಯಕ್ರಮದಲ್ಲಿ  ೧೯ ಸಾವಿರ ಮಂದಿಗೆ ಸೀರೆ ವಿತರಿಸಿ, ಕೋಟ್ಯಂತರ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಅಂದೇ ಕೊಡಗಿನಲ್ಲೂ ಸೀರೆ ಹಂಚಲಾಗುತ್ತಿದೆ. ಅಲ್ಲಿ ಮಾತ್ರ ತಾಲೂಕು ಕೇಂದ್ರಕ್ಕೆ ಕಾರ್‍ಯಕ್ರಮ ಸ್ಥಳಾಂತರಗೊಂಡಿಲ್ಲ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇದುವರೆಗೆ ನಡೆದ ಸೀರೆ ವಿತರಣೆ ಕಾರ್‍ಯಕ್ರಮ ಸಂಘಟನೆಯಾದದ್ದು ಜಿಲ್ಲಾ ಕೇಂದ್ರದಲ್ಲೇ. ಹಾಗಾಗಿ ಸಹಜವಾಗಿ ಚಾಮ ರಾಜನಗರದ ಜನತೆ `ಈ ಬಾರಿಯಾದರೂ ಮುಖ್ಯ ಮಂತ್ರಿಯವರು ಬಂದು ಅಭಿವೃದ್ಧಿಗೆ ಚಾಲನೆ ನೀಡುವರು' ಎಂದು ಕನಸು ಕಂಡರು. ಆದರೆ, ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಚಾಮರಾಜನಗರ ಜಿಲ್ಲೆಯ ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಗುಂಡ್ಲುಪೇಟೆಯಲ್ಲಿ ಸೀರೆ ಹಂಚುವುದಾಗಿ ಜಿಲ್ಲಾಡಳಿತ ಪ್ರಕಟಿಸಿತು. ಇದರಿಂದ ಜನ ಅಯ್ಯೋ ನಮ್ಮ ಆಸೆ ಇಷ್ಟೇ ಎಂದು ಪರಿತಪಿಸುವಂತಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ