ಜೀವನದ ಸಮಸ್ತವೂ ಸಾಹಿತ್ಯದ ಭಾಗ:ಹಳೆಮನೆ

ಹನಗೋಡು ನಟರಾಜ್/ನವೀನ್, ಪಿರಿಯಾಪಟ್ಟಣ ವಿಕ ಸುದ್ದಿಲೋಕ ಹುಣಸೂರು
ಜೀವನ ಮತ್ತು ಸಾಹಿತ್ಯ ಬೇರೆ ಎಂಬ ಭೇದಭಾವ ನಿಧಾನವಾಗಿ ಕಡಿಮೆಯಾಗುತ್ತ ಜೀವನದ ಸಮಸ್ತವೂ ಸಾಹಿತ್ಯದ ಒಂದು ಭಾಗ, ಆದ್ದರಿಂದ ಸಾಹಿತ್ಯ ಚರ್ಚೆ ಎನ್ನುವಂತಹದ್ದು ಜೀವನದ ಸಮಸ್ಯೆಗಳನ್ನು ಕುರಿತು ನಡೆಯುವ ಚರ್ಚೆ ಎನ್ನುವ ಅಭಿಪ್ರಾಯ ಮೂಡುತ್ತಿದೆ ಎಂದು ರಂಗಾಯಣ ನಿರ್ದೇಶಕ ಲಿಂಗದೇವರು ಹಳೆಮನೆ ತಿಳಿಸಿದರು.
ಹುಣಸೂರಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಹುಣಸೂರು ಕೃಷ್ಣಮೂರ್ತಿ ವೇದಿಕೆ ಯಲ್ಲಿ ಏರ್ಪಡಿಸಲಾಗಿದ್ದ ಸಂಕೀರ್ಣಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಇಲ್ಲಿನ ಆದಿವಾಸಿಗಳು ಹುಣಸೂರಿನ ಸಂಸ್ಕೃತಿಗೆ ವೈವಿಧ್ಯತೆಯನ್ನು ತಂದುಕೊಟ್ಟಿದ್ದಾರೆ. ಆದರೆ ಇವರು ಎದುರಿಸುತ್ತಿರುವ ಸಮಸ್ಯೆಗಳನ್ನು ಬದಲಾಗುತ್ತಿರುವ ಆರ್ಥಿಕ ಸುಧಾರಣೆಯಲ್ಲಿ ಆರ್ಥಮಾಡಿಕೊಳ್ಳ ಬೇಕಾಗಿದೆ ಎಂದರು.
ಭಾರತದಲ್ಲಿ ಬಡಕಟ್ಟು ಜನರ ಸಂಖ್ಯೆ ಗಣನೀಯ ವಾಗಿದೆ. ಆದರೆ ಇವರು ಬದುಕುತ್ತಿರುವ ರೀತಿ ಪ್ರಧಾನಧಾರೆಯ ಜೀವನಕ್ಕಿಂತ ಭಿನ್ನವಾದುದು. ಇದನ್ನು ಗಮನಿಸಿ ಅನೇಕ ಚಿಂತಕರು, ಆದಿವಾಸಿ ಸಮಾಜವನ್ನು ‘ಅದರ್ ಇಂಡಿಯಾ’ ಎನ್ನುವ ಮೂಲಕ ಇದು ಬೇರೆಯದೆ ಆದ ಭಾರತ ಎಂದ ಕರೆಯ ಲಾಗುತ್ತಿದೆ. ಈ ವ್ಯವಸ್ಥೆ ವಿಚಿತ್ರವಾದ ಡಿಜಿಟಲ್ ಡಿವೈಡ್‌ಗೆ ಬಂದು ನಿಂತಿದೆ. ಆದ್ದರಿಂದ ಈ ಕುರಿತ ಚಿಂತನೆಯನ್ನು ಇಂತಹ ಸಭೆಗಳಲ್ಲಿ ಚರ್ಚಿಸುವ ಮೂಲಕ ಸಾಮಾನ್ಯರಿಗೂ ಇದರ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ