ಹೋರಾಟಕ್ಕೆ ಸಜ್ಜಾದ ಭೂಮಿತಾಯಿ ಮಕ್ಕಳು


 ವಿಕ ಸುದ್ದಿಲೋಕ ಮೈಸೂರು 
ಹಸಿರು ಹೊದ್ದ ಭೂಮಿ. ತೆನೆಗಟ್ಟಿದೆ ಭತ್ತ. ಹೂ ನಗೆ ಸೂಸುತ್ತಿರುವ ತೆಂಗು, ಕಂಗು, ಕಬ್ಬು , ಅರಿಶಿನ, ತರಕಾರಿ. ಸಮೃದ್ಧಿಯ ವಾತಾವರಣ. ಆದರೆ,ಗ್ರಾಮಸ್ಥರ ಮುಖದಲ್ಲಿ ಮಡುಗಟ್ಟಿದ ಆತಂಕ.ನೆಲ,ನೆಲೆ ಎರಡನ್ನೂ ಕಳೆದುಕೊಳ್ಳುವ ಭಯ.
ಇದು ಎಚ್.ಡಿ.ಕೋಟೆ  ತಾಲೂಕು ಹಳ್ಳದ ಮನುಗನಹಳ್ಳಿ ಗ್ರಾಮದ ಸದ್ಯದ ವಾತಾವರಣ. ಊರಿನ ಪ್ರವೇಶದಲ್ಲಿರುವ ಕೆರೆ ತುಂಬಿ ತುಳುಕುತ್ತಿದೆ. ೩೦,೪೦ ಅಡಿ ಕೊರೆದರಷ್ಟೆ ಸಾಕು, ಕೊಳವೆ ಬಾವಿಗಳು ನೀರು ಸೂಸುತ್ತವೆ. ಕೆಲವಂತೂ ತಾನೇ ತಾನಾಗಿ ಉಕ್ಕುತ್ತಿವೆ. ವರ್ಷಕ್ಕೆ ಎರಡು,ಕೊಳವೆ ಬಾವಿ ಹೊಂದಿದವರು ಮೂರು ಬೆಳೆ ತೆಗೆಯುತ್ತಾರೆ. ಆದರೂ,ಅಧಿಕಾರಿಗಳ ಪ್ರಕಾರ  ಇದು ಬರಡು ಭೂಮಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ