ಪ್ರವಾಸೋದ್ಯಮ ಸದೃಢತೆಗೆ ದಸರೆಯೇ ವೇದಿಕೆ

ಮೈಸೂರು ದಸರೆ ಹಾಗೂ ಪ್ರವಾಸೋದ್ಯಮ...
ಈ ಎರಡು ಒಂದನ್ನು ಬಿಟ್ಟು ಇನ್ನೊಂದಿಲ್ಲ. ಪ್ರವಾಸೋದ್ಯಮದ ಅಭಿವೃದ್ಧಿ ಯಲ್ಲಿ ಮೈಸೂರು ದಸರೆಯ ಪಾತ್ರ ಪ್ರಮುಖವಾದದ್ದು. ದಸೆರೆಗೆ ಪ್ರವಾ ಸೋದ್ಯಮವೇ ಚಿಮ್ಮು ಹಲಗೆ. ದಸರೆ ಎಂದರೆ ಅದೊಂದು ಧಾರ್ಮಿಕ, ಪಾರಂಪರಿಕ, ಸಾಂಸ್ಕೃತಿಕ ಉತ್ಸವ ಎನ್ನುವ ಪರಿಕಲ್ಪನೆ ಈಗಲೂ ಜನಮಾನಸ ದಲ್ಲಿ ಉಳಿದಿದೆ.ಆಯಾ ಸಾಲಿನ ದಸರೆ ಆರಂಭವಾಗಬೇಕು ಎನ್ನುವ ಮಾತು ಕೇಳಿಬರುತ್ತಿದ್ದಂತೆ ಒಂದೆರಡು ತಿಂಗಳು ಮುಂಚೆ ಸಭೆ, ಸಿದ್ಧತೆ ಚಟುವಟಿಕೆ ಗಳು ಆರಂಭವಾಗುತ್ತವೆ. ಇದು ಮೊದಲಿನಿಂದ ನಡೆದುಕೊಂಡು ಬಂದಿದೆ. ಸ್ಥಳೀಯವಾಗಿ ಅಧಿಕಾರಿಗಳು ದಸರೆಯನ್ನು ಯಶಸ್ವಿಯಾಗಿ ನಿಭಾಯಿಸಲು ಶ್ರಮಿಸಬಹುದೇ ಹೊರತು ವರ್ಷವಿಡೀ ದಸರೆಯ ಕುರಿತೇ ಚಿಂತಿಸುತ್ತಾ ಕೂರಲು ಆಗುವುದಿಲ್ಲ.ಇದಕ್ಕಾಗಿ ಪ್ರಾಧಿಕಾರ ರೂಪದ ಒಂದು ಸಂಸ್ಥೆ ಬೇಕು. ನಾನಾ ಕ್ಷೇತ್ರಗಳ ತಜ್ಞರನ್ನೊಳಗೊಂಡ ಸಮಿತಿಗಳನ್ನು ರಚಿಸಿ ಅವರಿಂದ ಸೂಕ್ತ ಸಲಹೆ, ಸಹಕಾರ ಪಡೆದುಕೊಳ್ಳಬೇಕು. ದಸರೆಯ ಸಾಂಸ್ಕೃತಿಕ ಕಾರ್‍ಯಕ್ರಮಗಳಿಗೆ ಯಾವ್ಯಾವ  ಕಲಾವಿದರು ಆಗಮಿಸಲಿದ್ದಾರೆ. ಈ ವರ್ಷದ ದಸರೆ ವಿಶೇಷತೆ ಏನು ಎನ್ನುವ ಸ್ಪಷ್ಟ ಮಾಹಿತಿ ಮೂರ್‍ನಾಲ್ಕು ತಿಂಗಳು ಮೊದಲೇ ಜಾಗತಿಕ ಮಟ್ಟದಲ್ಲೂ ತಿಳಿಯುವಂತಾಗ ಬೇಕು. ಪ್ರವಾಸೋದ್ಯಮದ ನೆಪದಲ್ಲಿ ಮೂಲ ಸೌಕರ್‍ಯ ಕಲ್ಪಿಸುವಲ್ಲಿ ದಸರೆಯೂ ವೇದಿಕೆಯಾಗಬೇಕು. ದಸರೆಗೆ ನೀಡುವ ಅನುದಾನದಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಮೂಲ ಸೌಕರ್‍ಯ ಕಲ್ಪಿಸುವ ಕೆಲಸವಾದರೆ ನಿಜಾರ್ಥದಲ್ಲಿ ಪ್ರವಾಸೋದ್ಯಮ ಬೆಳವಣಿಗೆಯಾಗುತ್ತದೆ.
ದಸರೆಗೆ ನವನವೀನತೆ ತರುವ ಜತೆಯಲ್ಲಿ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಸಮಯ ಬೇಕು. ಅವಸರ ದಲ್ಲಿಯೇ ದಸರೆಗೆ ತಯಾರಿ ಮಾಡಿಕೊಂಡಾಗ ಪ್ರವಾಸೋದ್ಯಮಕ್ಕೆ ಸದೃಢತೆಯೇ ಬರುವುದಿಲ್ಲ. ಅದರ ಬದಲು ದೀರ್ಘಾವಧಿಯ ಯೋಜನೆಗಳನ್ನು ಹಾಕಿಕೊಂಡು ಅದನ್ನು ಹಂತ ಹಂತವಾಗಿ ಅನುಷ್ಠಾನ ಗೊಳಿಸಲು ಪ್ರಾಧಿಕಾರದ ಅಗತ್ಯ ಇದ್ದೇ ಇದೆ.
-ಜಿ.ಕುಮಾರನಾಯಕ್, ಹಿರಿಯ ಐಎಎಸ್ ಅಧಿಕಾರಿ, ಮೈಸೂರು ಹಿಂದಿನ ಜಿಲ್ಲಾಧಿಕಾರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ