೧೧ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

ಹನಗೋಡು ನಟರಾಜ್/ನವೀನ್ ಪಿರಿಯಾಪಟ್ಟಣ
ಹುಣಸೂರು ಕೃಷ್ಣಮೂರ್ತಿ ವೇದಿಕೆ
ಕನ್ನಡ ಕನ್ನಡಿಗರನ್ನು ಸಾಕುವ ಭಾಷೆಯಾಗಬೇಕು ಎಂದು ೧೧ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ  ಪ್ರೊ.ಕೆ.ಎಸ್.ಭಗವಾನ್ ಅಭಿಪ್ರಾಯಪಟ್ಟರು.
ಹುಣಸೂರು ಕೃಷ್ಣಮೂರ್ತಿ ವೇದಿಕೆಯಲ್ಲಿ  ಶನಿವಾರ ಆರಂಭಗೊಂಡ ಸಮ್ಮೇಳನದಲ್ಲಿ ಅಧ್ಯಕ್ಷ ಭಾಷಣ ಮಾಡಿದ ಅವರು, ಕನ್ನಡದಲ್ಲಿ  ಓದಿದರೆ ಕೆಲಸ ಸಿಗುತ್ತದೆ. ಜೀವನ ಸಲೀಸಾಗಿ ಸಾಗಿಸ ಬಹುದು, ಬದುಕಿಗೆ ಭದ್ರತೆ ಒದಗುತ್ತದೆ ಎಂದು ಖಾತ್ರಿಯಾದರೆ ಕನ್ನಡವನ್ನು ಯಾರು ಕಡೆಗಣಿಸುತ್ತಾರೆ? ಆದ್ದರಿಂದ ಸಂಬಂಧ ಪಟ್ಟವರು, ಮುಖ್ಯವಾಗಿ ಸರಕಾರ ಈ ಕಡೆ ಒತ್ತು ಕೊಡಬೇಕು ಎಂದರು.
ಜಾತ್ರೆಯೂ ಅಲ್ಲ, ಸಂತೆಯೂ ಅಲ್ಲ:  ಸಮ್ಮೇಳನ ಎಂಬುದು ಸಮಷ್ಟಿ  ಪ್ರಜ್ಞೆಯ ಸಂಕೇತ ಸಾಧನೆಗಳನ್ನು ಶೋಧಿಸುವ ಸಮಾವೇಶ ಎಂದ ಅವರು,  ಸಾಹಿತ್ಯ ಸಮ್ಮೇಳನಗಳನ್ನು ಕೆಲ ವರು ಜಾತ್ರೆ ಎನ್ನುವುದುಂಟು. ಸದ್ಯ ಅವರು ಸಂತೆ ಎನ್ನಲಿಲ್ಲ, ಸಂತೆಗೂ ಜಾತ್ರೆಗೂ ಮೂಲ ಭೂತ ವ್ಯತ್ಯಾಸ ಇದೆ. ಸಂತೆಯಲ್ಲಿ  ಕೇವಲ ಲೌಕಿಕ ಚಟುವಟಿಕೆಗಳು ಕಂಡು ಬಂದರೆ, ಜಾತ್ರೆಯಲ್ಲಿ ಅಲೌಕಿಕ ಸ್ತರದಲ್ಲಿ  ಭಾಗವಹಿಸಿದ ಅನುಭವವಾಗುತ್ತದೆ ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ