ಅಂಧ ಮಕ್ಕಳ ರಂಗ ಪ್ರೇಮ, ಅಭಿನಯ ತುಡಿತ, ಕ್ರಿಯಾಶೀಲತೆ, ಸೃಜನಶೀಲತೆ....ಅಂತರ್ಶಕ್ತಿಯ ದಿಗ್ದರ್ಶನ.
ಅದಕ್ಕೆ ಸಾಕ್ಷಿಯಾದುದು ಒಂದಿಲ್ಲೊಂದು ರಂಗ ಚಟುವಟಿಕೆಗಳಲ್ಲಿ ಸದ್ದಿಲ್ಲದೇ ಮಗ್ನವಾಗಿರುವ `ಬಣ್ಣ' ಗಳ ಬಯಲು ರಂಗಾಯಣ. ಅಲ್ಲೊಂದು ವಿಶೇಷ ನಾಟಕ ರಂಗ ವೇದಿಕೆ ಏರಿ ಮತ್ತೊಂದು ಪ್ರಯೋಗಾತ್ಮಕ ಆಯಾಮಕ್ಕೆ ಒಪ್ಪಿಸಿಕೊಂಡಿತು.
ಅದು `ಕಾಣದ ಕಡಲಿಗೆ...'ನಾಟಕ. ನಾಟಕದಲ್ಲಿ ಅಭಿನಯಿಸಿದ ನಟರು ಅಂಧರು. ಆದರೆ ಕಣ್ಣು ಕಾಣದವರು ನಾಟಕ ಪ್ರದರ್ಶಿಸಿ ಕಣ್ಣಿರುವವರು ಕಣ್ಣು ತೆರೆದು ನೋಡುವಂತೆ ಮಾಡಿದರು. ಮಾತಿಗಿಂತ ಕವಿತೆ ಗಳು ಹೆಚ್ಚು ಮಾತನಾಡಿದವು. ಕವಿತೆಗಳಲ್ಲೇ ನಾಟಕವನ್ನು ಕಟ್ಟಿಕೊಡಲಾಯಿತು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ